ಕೋಲಾರ: ಎಷ್ಟೇ ಅಪಘಾತಗಳು ಸಂಭವಿಸಿ ಪ್ರಾಣಾಹಾನಿಯಾದರೂ ಯುವಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಬೈಕ್ ವ್ಹೀಲಿಂಗ್ ಹುಚ್ಚಾಟ ನಿಂತಿಲ್ಲ. ಕೋಲಾರ ಜಿಲ್ಲೆಯಲ್ಲಿ ಸಹ ವ್ಹೀಲಿಂಗ್ ಗುಂಪುಗಳ ಕಿರಿಕಿರಿ ಮಿತಿಮೀರಿದೆ.
ಬೆಂಗಳೂರು – ತಿರುಪತಿ ರಾಷ್ಟ್ರೀಯ ಹೆದ್ದಾರಿಯ ನರಸಾಪುರ ಕೈಗಾರಿಕಾ ವಲಯದ ಬಳಿ ಯುವಕರ ಗುಂಪು ಈ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿರುವ ಬಗ್ಗೆ ದೂರು ಬಂದಿದೆ.
- Advertisement 2
ಬೈಕ್ ಮೇಲೆ ಒಂದು ಕಾಲಿನಲ್ಲಿ ನಿಂತು ಒಂದೇ ಚಕ್ರದಲ್ಲಿ ಚಲಿಸುವ ಬೈಕ್ ಸವಾರನ ವೀಲಿಂಗ್ ದೃಶ್ಯಾವಳಿ ಮೊಬೈಲಿನಲ್ಲಿ ಸೆರೆಯಾಗಿದೆ. ಇದರಿಂದ ಇತರೆ ಅಕ್ಕಪಕ್ಕದ ವಾಹನ ಚಾಲಕರು ಆತಂಕದಲ್ಲಿಯೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಜಿಲ್ಲೆಯ ಪೊಲೀಸರು ಈ ಬೈಕ್ ವ್ಹೀಲಿಂಗ್ ಪುಂಡರನ್ನು ಎಚ್ಚರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.