ಮೈಸೂರು: ಪಕ್ಕದ ಮನೆಯ ಹುಡುಗ ಚುಡಾಯಿಸಿದನೆಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನ ಕಲ್ಲಹಳ್ಳಿಯಲ್ಲಿ ನಡೆದಿದೆ.
- Advertisement 2
ಜಯಶ್ರೀ ಅವರನ್ನು ಪಕ್ಕದ ಮನೆಯ ಯುವಕ ಮಂಜು ಎಂಬಾತ ಆಗಾಗ ಚುಡಾಯಿಸುತ್ತಿದ್ದ. ಇದರಿಂದ ಮನನೊಂದ ಜಯಶ್ರೀ 18 ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಜಯಶ್ರೀ ಮೃತಪಟ್ಟಿದ್ದಾರೆ.
- Advertisement 3
- Advertisement 4
ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.