– ಆರ್.ಆರ್ ನಗರದಲ್ಲಿ ವ್ಯಕ್ತಿ ಪರವಾಗಿ ಪ್ರಚಾರ ಮಾಡಿದ್ದಾರೆ
ತುಮಕೂರು: ನನ್ನ ನಿಖಿಲ್ ಮಧ್ಯೆ ಏನೂ ಇಲ್ಲ ಎಂದು ದರ್ಶನ್ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ನಟ ನಿಖಿಲ್ ಕುಮಾರಸ್ವಾಮಿಯವರು ಹೇಳಿದ್ದಾರೆ.
ಇಂದು ಉಪಚುನಾವಣೆಯ ಪ್ರಚಾರದ ಅಂಗವಾಗಿ ನಿಖಿಲ್ ಕುಮಾರಸ್ವಾಮಿಯವರು ಶಿರಾದಲ್ಲಿ ನಡೆದ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿರಾ ಕ್ಷೇತ್ರದ ಜನರು ಜೆಡಿಎಸ್ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಇಂದು ವ್ಯಕ್ತವಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.
- Advertisement 2
- Advertisement 3
ಜೊತೆಗೆ ನನ್ನ ಮತ್ತು ನಿಖಿಲ್ ಮಧ್ಯೆ ಏನೂ ಇಲ್ಲ ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ. ಪದೇ ಪದೇ ಮಾಧ್ಯಮದವರು ಈ ಪ್ರಶ್ನೆ ಕೇಳಬೇಡಿ. ಆರ್.ಆರ್ ನಗರದಲ್ಲಿ ದರ್ಶನ್ ಅವರು ವ್ಯಕ್ತಿ ಪರವಾಗಿ ಪ್ರಚಾರ ಮಾಡಿದ್ದಾರೆ. ಅದಕ್ಕೆ ಅವರು ಸ್ವತಂತ್ರರು. ಅವರ ಅಭಿಮಾನ ಮತವಾಗಿ ಬದಲಾಗುತ್ತಾ ಅನ್ನೋದನ್ನು ಕಾದು ನೋಡಬೇಕು. ಆದರೆ ಆರ್.ಆರ್ ನಗರದಲ್ಲೂ ಜೆಡಿಎಸ್ ಪರ ಮತದಾರರು ಇದ್ದಾರೆ ಎಂದು ತಿಳಿಸಿದರು.
- Advertisement 4
ಶಿರಾ ಕ್ಷೇತ್ರದಲ್ಲಿ ಮತದಾರರು ನಮ್ಮ ಪರ ಒಲಿಯಲಿದ್ದಾರೆ. ಟಿ.ಬಿ.ಜಯಚಂದ್ರ ಅವರು ಈ ಹಿಂದೆ ಮಂತ್ರಿಯಾಗಿದ್ದವರು, ಆಗ ಯಾಕೆ ಮದಲೂರು ಕೆರೆ ತುಂಬಿಸಿಲ್ಲ. ಚುನಾವಣೆಯಲ್ಲಿ ಮತ ಪಡೆಯಲು ಜನರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.