– ಎಕ್ಕರೆಗಟ್ಟಲೆ ಕೃಷಿಯನ್ನ ನುಂಗುತ್ತಿವೆ
ಮಂಗಳೂರು: ಬಸವನಹುಳು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮಳೆಗಾಲ ಆರಂಭವಾದರೆ ಅವುಗಳು ಎಲ್ಲಾ ಕಡೆ ಇರುತ್ತವೆ. ಇದೇ ಮಾದರಿಯ ಆಫ್ರಿಕನ್ ದೇಶದ ಬಸವನಹುಳುಗಳು ಈಗ ರೈತರಿಗೆ ಕಾಡಲು ಆರಂಭಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ವಿವಿಧ ಕಡೆ ಈ ಹುಳುವಿನ ಕಾಟ ತಡೆಯಲು ರೈತರಿಗೆ ಆಗುತ್ತಿಲ್ಲ. ರಬ್ಬರ್, ಅಡಿಕೆ, ತೆಂಗಿನಮರ ಸೇರಿದಂತೆ ಎಲ್ಲಾ ಕೃಷಿಯನ್ನು ಇವು ನಾಶಗೊಳಿಸುತ್ತಿವೆ. ಒಂದೇ ಬಾರಿಗೆ ಸಾಕಷ್ಟು ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿರುವ ಇವುಗಳು ಒಂದು ಗಿಡಕ್ಕೆ ಹತ್ತಿದರೆ ಎಕರೆಗಟ್ಟಲೆ ಸಸ್ಯವನ್ನು ನಾಶಪಡಿಸುತ್ತವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
- Advertisement 2
- Advertisement 3
ರೈತರು ಕೃಷಿಯನ್ನು ಉಳಿಸಿಕೊಳ್ಳುವುದು ಹೇಗೆ ಅಂತ ತಲೆಕೆಡಿಸಿಕೊಂಡು ವಿಜ್ಞಾನಿಗಳ ಮೊರೆ ಹೋಗಿದ್ದಾರೆ. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿ ರೈತರಿಗೆ ಒಂದು ಪರಿಹಾರವನ್ನು ಕೂಡ ನೀಡಿದೆ.
- Advertisement 4
ಕೃಷಿ ತೋಟಗಳಲ್ಲಿ ರೋಗಕ್ಕೆ ತುತ್ತಾದ ಪ್ರದೇಶ ಪತ್ತೆ ಹಚ್ಚಿ 100 ಚದರ ಅಡಿ ಪ್ರದೇಶದಲ್ಲಿ 50-80 ಗ್ರಾಂ ಮೆಟಾಲ್ಡಿಹೈಡ್ ರಾಸಾಯನಿಕ ಸಣ್ಣಸಣ್ಣ ತುಂಡುಗಳನ್ನು ಒಂದು ಎಕರೆ ತೋಟದಲ್ಲಿ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿದರು. ಇದಲ್ಲದೆ ಅಡಿಕೆ ದೋಣಿಗಳನ್ನು ಸೆಲರಿ ನೀರಿನಲ್ಲಿ ಅದ್ದಿ ತೆಗೆದು ತೋಟದಲ್ಲಿ 4 ಇಂಚು ಎತ್ತರದಲ್ಲಿಡುವುದು. ಪಪ್ಪಾಯಿ, ಎಲೆ ಕೋಸು ತುಂಡುಗಳನ್ನು ಕೀಟನಾಶಕದಲ್ಲಿ ಲೇಪಿಸಿ ಅಡಿಕೆ ಹಾಳೆಗಳನ್ನು ಇಡಬಹುದಾಗಿದೆ.
ಇದು ರೈತರಿಗೆ ಅಷ್ಟು ಸಹಕಾರಿಯಾಗಲ್ಲ. ನಿರಂತರ ಪ್ರಕ್ರಿಯೆ ಆಗಿರುವುದರಿಂದ ಇದು ದುಬಾರಿಯಾಗುತ್ತೆ. ಬೆಳೆ ಉಳಿಸಿಕೊಳ್ಳಲು ಮತ್ತು ಜಮೀನನ್ನು ಕಾಪಾಡಿಕೊಳ್ಳಲು ರೈತ ಸಾಲಗಾರನಾಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನವಹಿಸಿ ರೈತನ ನೆರವಿಗೆ ಬರಬೇಕೆಂದು ರೈತರು ಆಗ್ರಹಿಸಿದ್ದಾರೆ.