ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಜಮೀರ್ ನೇರ ಕಾರಣ: ಭಾಸ್ಕರ್ ರಾವ್

Public TV
3 Min Read
Bhaskar Rao

ಬೆಂಗಳೂರು: ಚಾಮರಾಜಪೇಟೆಯಲ್ಲಿ (Chamrajpet) ಹಸು ಕೆಚ್ಚಲು ಕೊಯ್ದ ಪ್ರಕರಣದಕ್ಕೆ ಸಚಿವ ಜಮೀರ್ ಅಹ್ಮದ್ (Zameer Ahmed) ನೇರ ಕಾರಣ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ (Bhaskar Rao) ಆರೋಪ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲಿಯೂ ಆಗದಿರುವ ಘಟನೆ ನಿನ್ನೆ ಆಗಿದೆ. ಇದೊಂದು ಷಡ್ಯಂತ್ರ. ಚಾಮರಾಜಪೇಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನ ಓಡಿಸಲು ಷಡ್ಯಂತ್ರ. ಸಚಿವ ಜಮೀರ್ ಮೂರು ಹಸು ಕೊಡಿಸುತ್ತೇನೆ ಎಂದಿದ್ದಾರೆ. ಅವರಿಗೆ ಭಾವನೆಯೇ ಇಲ್ಲ, ಅದೇನು ಆಟದ ವಸ್ತುವಾ? ತಾಳ್ಮೆಯಿಂದ ಇರುವ ಕಾರಣ ರಕ್ತಪಾತ ಆಗಿಲ್ಲ. ರಾಜ್ಯ ಸರ್ಕಾರದ ಅದೃಷ್ಟ ಇದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಕ್ಸಲರ ಶರಣಾಗತಿಗೆ ದನಕಾಯೋ ವೃದ್ಧೆಯ ಮಧ್ಯಸ್ಥಿಕೆ

2,227 ಹಸುಗಳು ಆ ಭಾಗದಲ್ಲಿವೆ. ಪಶು ಆಸ್ಪತ್ರೆ ಡೆಮಾಲಿಷ್ ಮಾಡಿ ಸ್ಕೂಲ್ ಕಟ್ಟಲು ಹೊರಟಿದ್ದಾರೆ. ಬೇರೆ ಕಡೆಯಲ್ಲಿ ಸ್ಕೂಲ್ ಕಟ್ಟಲಿ. ಮದರಸ ಎದುರು ಅಲ್ಲಿ ಹಸುಗಳನ್ನು ಕಟ್ಟುತ್ತಾರೆ. ಘಟನೆಗೆ ಸಚಿವ ಜಮೀರ್ ಅಹ್ಮದ್ ನೇರ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ:  ಜ.26 ರಂದು ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ – ಬೆದರಿಕೆ ಕರೆ, ಆರೋಪಿ ಅರೆಸ್ಟ್‌

ಜಮೀರ್ ಕೊಡುವ ಹಣದ ಹಿಂದೆ ಕಾಂಗ್ರೆಸ್‌ನವರು ಹೋಗುತ್ತಾರೆ ಅಷ್ಟೇ. ಪ್ರಕರಣ ಮುಚ್ಚಿಹಾಕಲು ಬಿಹಾರ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಮುಸ್ಲಿಂ ಯುವಕರಿಗೆ ಕೆಲಸ ಇಲ್ಲ ಕಾರ್ಯ ಇಲ್ಲ. ಜಮೀರ್ ಅಹ್ಮದ್ ಮಾಡುತ್ತಿರುವ ಈ ಕೆಲಸವನ್ನು ಮುಸ್ಲಿಂ ಸಮುದಾಯದವರೇ ಮೆಚ್ಚೋದಿಲ್ಲ. ಜಮೀರ್ ಕ್ರಿಯೇಟ್ ಮಾಡುತ್ತಿರೋ ಕೆಲಸದಿಂದ ಜಮೀರ್ ಶ್ರೀಮಂತ ಆಗುತ್ತಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಒಳ್ಳೆಯವರಿದ್ದಾರೆ. ಆದರೆ ನಾಯಕತ್ವ ಪ್ರಶ್ನಿಸುತ್ತಿದ್ದೇನೆ. ಎಫ್‌ಐಆರ್ ಕೂಡ ಸರಿಯಾಗಿ ಹಾಕಿಲ್ಲ. ಅಮಾಯಕನನ್ನ ಕರೆದು ತಂದು ಕೂರಿಸಿದ್ದಾರೆ. ಹಸು ಸಾಕಿದವರನ್ನು ಓಡಿಸಲು, ಪಶು ಆಸ್ಪತ್ರೆ ಕಬಳಿಸಲು ಈ ತಂತ್ರ ಅಷ್ಟೇ. ಸಾವಿರ ಗೋವನ್ನು ತಂದು ಕೊಟ್ಟರೂ ಮಾಡಿದ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ತಿರುಪತಿ ಲಡ್ಡು ಕೇಂದ್ರದಲ್ಲಿ ಅಗ್ನಿ ಅವಘಡ – ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ


ಜಮೀರ್ ಅಹ್ಮದ್‌ಗೆ ಬಾಲ ಬಿಚ್ಚೋಕೆ ಕಾರಣ ಸಿದ್ದರಾಮಯ್ಯ. ಕಲ್ಲು ಎಸೆಯೋರು, ಬೆಂಕಿ ಹಚ್ಚುವ ಮುಸ್ಲಿಂ ಹುಡುಗರನ್ನು ರೆಡಿ ಮಾಡುತ್ತಿದ್ದಾರೆ. ಇದು ಕ್ರಿಯೆಟ್ ಮಾಡುತ್ತಿರೋದು ಜಮೀರ್ ಅಹ್ಮದ್. ಹಿಂದೂ ವಿರೋಧವಾಗಿ ಮಾಡುತ್ತಿದ್ದಾರೆ. ಈ ಘಟನೆ ಬಸವನಗುಡಿ ಬಿಟಿಎಂ ಜಯನಗರದಲ್ಲಿ ಮಾಡೋಕೆ ಆಗುತ್ತಾ? ಚಾಮರಾಜ ಪೇಟೆಯಲ್ಲಿ ಮಾತ್ರ ಸಾಧ್ಯ. ನಾನು ಸಮುದಾಯದ ಬಗ್ಗೆ ಮಾತನಾಡುತ್ತಿಲ್ಲ. ಆ ಸಮುದಾಯದ ಲೀಡರ್ ಬಗ್ಗೆ ಮಾತಾಡುತ್ತಿದ್ದೇನೆ. ಪ್ರಕರಣದಲ್ಲಿ ಈಗ ಬಂಧನ ಆದವನು ಬಿಹಾರಿ. ಅವನು ಹುಚ್ಚ. ಅವನಿಗೂ ಇದಕ್ಕೂ ಸಂಬಂಧ ಇಲ್ಲ. ಅಮಾಯಕನ ಕರ್ಕೊಂಡು ಬಂದಿದ್ದಾರೆ. ಈ ಆಸ್ಪತ್ರೆ ಕಬ್ಜ ಮಾಡಬೇಕು ಎಂದು ಹೀಗೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ವಿಜಯಪುರ| ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನ


ಯಾಕೆ 153 ಅಡಿ ಕೇಸ್ ಹಾಕಿಲ್ಲ. ಇದು ಕಮ್ಯುನಲ್ ಆಕ್ಟ್ ಅಡಿ ಆಗಬೇಕಾದ ಕೇಸ್. ಆ ಆಸ್ಪತ್ರೆ ಮುಂದುವರಿಯಬೇಕು. ಚಾಮರಾಜಪೇಟೆಯಲ್ಲಿ ಬಡತನ ಇದೆ. ಸಿದ್ದರಾಮಯ್ಯ ಮಾಡುತ್ತಿರೋದು ರಾಜಕೀಯ. ಕೂಡಲೇ ನಿಜವಾದ ಆರೋಪಿಯನ್ನು ಬಂಧಿಸಬೇಕು. ಸಿಸಿ ಟಿವಿ ಹಾಕಬೇಕು. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಮುಂದೆ ಅನಾಹುತ ಆದರೆ ಅದಕ್ಕೆ ಕಾರಣ ಸರ್ಕಾರ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇಲ್ಲ – ಸುರ್ಜೇವಾಲ

ಜಮೀರ್ ಹಣದಲ್ಲಿ ಹಸು ಕೊಡಿಸೋದು ಬೇಡ. ಸರ್ಕಾರ ಹಣ ಕೊಡಬೇಕು. ಇದು ಸರ್ಕಾರದ ವೈಫಲ್ಯ. ಜಮೀರ್ ಹಣ ಕೊಡೋಕೆ ಆಟದ ವಸ್ತು ಅಲ್ಲ. 1,000 ಹಸು ಕೊಟ್ಟರೂ ಅವರ ಪಾಪ ಕಡಿಮೆ ಆಗಲ್ಲ. ಜಮೀರ್ ಬ್ರಿಗೇಡ್ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರ | ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಝಡ್-ಮೋರ್ಹ್ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ

Share This Article