ಸೈಕಲ್ ರವಿ ಜೊತೆ ನಂಟು ಆರೋಪದಲ್ಲಿ ಜಮೀರ್ ರಾಜಕೀಯ-ವಿಚಾರಣೆ ನಡೆಸಿದ್ದಕ್ಕೆ ಅಲ್ತಾಫ್‍ಖಾನ್ ಕಿಡಿ

Public TV
1 Min Read
ZAMEER

ಬೆಂಗಳೂರು: ಸೈಕಲ್ ರವಿ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಮರಾಜಪೇಟೆಯ ಜೆಡಿಎಸ್ ನ ಪರಾಜಿತ ಅಭ್ಯರ್ಥಿ ಅಲ್ತಾಫ್‍ ಖಾನ್ ನನ್ನು ಸಿಸಿಬಿ ಪೊಲಿಸರು ವಿಚಾರಣೆ ನಡೆಸಿದ್ರು.

ಸೈಕಲ್ ರವಿ ಮತ್ತು ಅಲ್ತಾಫ್ ಖಾನ್ ನಡುವೆ ಸಂಪರ್ಕ ಇದೆ ಎಂಬ ನಿಟ್ಟಿನಲ್ಲಿ ವಿಚಾರಣೆ ನಡೆಸಿದ್ದು, ಸಂಪರ್ಕದ ಬಗ್ಗೆ ಡಿಟೇಲ್ ನ್ನು ಕಲೆಹಾಕಿದ್ದಾರೆ. ಇದನ್ನೂ ಓದಿ: ಸೈಕಲ್ ರವಿ ಜೊತೆ ನಂಟು ಪ್ರಕರಣ – ಸಿಸಿಬಿ ಪೊಲೀಸರಿಂದ ಸಾಧುಕೋಕಿಲಾ ವಿಚಾರಣೆ

ವಿಚಾರಣೆ ಬಳಿಕ ಅಲ್ತಾಫ್ ಖಾನ್ ಮಾತನಾಡಿ, ಇದೆಲ್ಲಾ ರಾಜಕೀಯ ಗಿಮಿಕ್ಕು. ರಾಜಕೀಯ ಗಿಮಿಕ್ಕಿಗಾಗಿ ಜಮೀರ್ ಅಹಮದ್ ಈ ರೀತಿ ಮಾಡ್ತಾ ಇದ್ದಾನೆ. ಆದರೆ ಸೈಕಲ್ ರವಿನಾ ನಾನು 18 ವರ್ಷದ ಹಿಂದೆ ನೋಡಿದ್ದೆ. ಸೈಕಲ್ ರವಿ ತಮ್ಮ ಮಹೇಶ್ ನಮ್ಮ ಕ್ಷೇತ್ರದ ನಿವಾಸಿಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನನ್ನ ಪರವಾಗಿ ಕೆಲಸ ಮಾಡ್ತಾ ಇದ್ರು. ಈ ಸಂದರ್ಭದಲ್ಲಿ ಸೈಕಲ್‍ರವಿ ನನ್ನ ಜೊತೆ ಕಾಲ್ ಮಾಡಿ ಮಾತಾಡಿದ್ರು. ಇದನ್ನೂ ಓದಿ: ರೌಡಿಶೀಟರ್‌ಗೆ ಹಾಸ್ಯನಟ ಸಾಧುಕೋಕಿಲ ಕರೆ!

ಆದರೆ ಮಾತಾಡಿದ್ದು ಸೈಕಲ್ ರವಿನೋ ಯಾರೋ ನನಗೆ ಸರಿಯಾಗಿ ಗೊತ್ತಿಲ್ಲ. ಆದ್ರೆ ಅವರ ನಂಬರ್ ನಿಂದ ಕಾಲ್ ಬಂದಿದ್ದು ನಿಜ. ಎಲೆಕ್ಷನ್ ಬ್ಯುಸಿನಲ್ಲಿದ್ದಿದ್ದರಿಂದ ಸರಿಯಾಗಿ ಗೊತ್ತಾಗಲಿಲ್ಲ. ಆದರೆ ಇವತ್ತು ಸಿಸಿಬಿ ಪೊಲಿಸರು ಸೈಕಲ್ ರವಿಗೂ ನನಗೂ ಸಂಪರ್ಕ ಇದೆ ಅಂತಾಹೇಳಿ ವಿಚಾರಣೆ ಕರೆದಿದ್ರು. ವಿಚಾರಣೆ ಮಾಡಿದ್ರು. ಆದರೆ ಟಿವಿಯಲ್ಲಿ ಏನೇನೋ ಬರ್ತಿದೆ. ಬೇಕಿದ್ರೆ ತನಿಖೆ ಮಾಡಲಿ ನಾನು ಎಲ್ಲವನ್ನು ಎದುರಿಸುವುದಾಗಿ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *