ಅಜ್ಜಿ ಇಲ್ಲ ಅನ್ನೋದು ತುಂಬಾ ದುಃಖ ಆಗ್ತಿದೆ- ಯುವರಾಜ್

Public TV
1 Min Read
Leelavathi 6

ನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ (Leelavathi) ಅವರು ನಿಧನರಾಗಿ ಎರಡು ದಿನಗಳು ಕಳೆದಿದೆ. ಈ ಬೆನ್ನಲ್ಲೇ, ಅಜ್ಜಿ ಲೀಲಾವತಿ ಜೊತೆಗಿನ ಒಡನಾಟದ ಬಗ್ಗೆ ವಿನೋದ್ (Vinod Raj) ಪುತ್ರ ಯುವರಾಜ್ (Yuvaraj) ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟಿದ್ವಿ- ವಿನೋದ್ ರಾಜ್

yuvarajಅಜ್ಜಿ ಇಲ್ಲ ಅನ್ನೋದು ತುಂಬಾ ದುಃಖ ಆಗ್ತಿದೆ. ಅಪ್ಪನನ್ನು ನೋಡಿದ್ರೆ ತುಂಬಾ ಬೇಸರ ಆಗುತ್ತದೆ. ಈ ವಯಸ್ಸಿನಲ್ಲೂ ಅಜ್ಜಿ ಜೊತೆ ಈಗಲೂ ಅಪ್ಪನಿಗೆ ತುಂಬಾ ಪ್ರೀತಿ ಇದೆ. ಅಪ್ಪನ ಸ್ಥಿತಿ ನೋಡಿದ್ರೆ, ತುಂಬಾ ಕಷ್ಟ ಆಗ್ತಿದೆ. ನನ್ನ ವಿದ್ಯಾಭ್ಯಾಸದ ಬಗ್ಗೆ ನಿರ್ಧಾರವನ್ನ ಅಜ್ಜಿನೇ ತೀರ್ಮಾನ ಮಾಡ್ತಿದ್ದರು. ಈಗ ಅವರಿಲ್ಲ, ಒಂಟಿ ಅಂತ ಅನಿಸುತ್ತಿದೆ.

vinod rajಒಳ್ಳೆಯ ಮಗನಾಗಿ ಎಲ್ಲರಿಗೂ ಸಹಾಯ ಮಾಡಬೇಕು. ಅಪ್ಪ ಯಾವಾಗಲೂ ಒಂದು ಮಾತು ಹೇಳ್ತಾರೆ, ಅಮ್ಮನ ಚೆನ್ನಾಗಿ ನೋಡಿಕೋ ಅಂತ. ಆ ಮಾತು ನನಗೆ ತುಂಬಾ ಇಷ್ಟ ಆಗುತ್ತೆ. ಅಜ್ಜಿಯಿಂದಲೇ ಕನ್ನಡ ಕಲಿತ್ತಿದ್ದು, ಅವರು ಇದಿದ್ರೆ ಇನ್ನೂ ಜಾಸ್ತಿ ಕನ್ನಡ ಕಲಿಯುತ್ತಿದ್ದೆ ಎಂದಿದ್ದಾರೆ ಯುವರಾಜ್.

vinod rajಅಜ್ಜಿ ತುಂಬಾ ಜನಸೇವೆ ಮಾಡಿದ್ದಾರೆ. ಅವರ ಕನಸನ್ನ ಅಪ್ಪ ಈಡೇರಿಸಿದ್ದಾರೆ. ಅಜ್ಜಿ, ಅಪ್ಪನ ದಾರಿಯಲ್ಲಿ ನಡೆಯುತ್ತೇನೆ. ಸಹಾಯ ಮಾಡಬೇಕು ಆದರೆ ನನ್ನ ಹೆಸರು ಎಲ್ಲೂ ಕೇಳಿಬರಬಾರದು ಎಂದು ಕಲಿತ್ತೇನೆ ಮುಂದೆ ಅದನ್ನೇ ಮಾಡುತ್ತೇನೆ ಎಂದು ಯುವರಾಜ್ ಮಾತನಾಡಿದ್ದಾರೆ. ಇದನ್ನೂ ಓದಿ:ಕಳಪೆ ಎಂದು ಜೈಲಿಗಟ್ಟಿದ ವಿನಯ್‌ ಮುಂದೆಯೇ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಕಾರ್ತಿಕ್‌

ನಟಿ ಲೀಲಾವತಿ (Leelavathi) ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡ್ಮೂರು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.

Share This Article