ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ, ನನ್ನ ಶಕ್ತಿಯಾಗಿ ನಿಂತಿದ್ದಾರೆ- ‘ಯುವ’ ಭಾವುಕ

Public TV
3 Min Read
yuva 7

‘ಯುವ’ (Yuva) ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮ ಹೊಸೆಪೇಟೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ‘ಯುವ’ ಸಿನಿಮಾದ ಇವೆಂಟ್‌ನಲ್ಲಿ ನಾನು ಹೋದ ಕಡೆಯೆಲ್ಲಾ ಅಪ್ಪು ಮಗ ಬಂದ ಅಂತ ಕರೆಯುತ್ತಾರೆ ಎಂದು ಅಪ್ಪುರನ್ನು (Puneeth Rajkumar)  ಸ್ಮರಿಸಿ ಯುವರಾಜ್‌ಕುಮಾರ್ ಭಾವುಕರಾಗಿದ್ದಾರೆ.

yuva rajkumar‘ಯುವ’ ಚಿತ್ರದ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಇಡೀ ಕುಟುಂಬ ಹಾಜರಿ ಹಾಕುವ ಮೂಲಕ ಸಾಥ್ ನೀಡಿದ್ದರು. ಯುವರಾಜ್‌ಕುಮಾರ್ ಅಪ್ಪುಗೆ ಮಗನಿದ್ದಂತೆ, ‘ಯುವ’ ಅಪ್ಪು ಮಗನೇ ಎಂದು ರಾಘಣ್ಣ (Raghavendra Rajkumar) ಭಾವುಕರಾದರು. ರಾಘಣ್ಣ ಮಾತಿಗೆ ಹೊಸಪೇಟೆ ಜನತೆ ಖುಷಿಪಟ್ಟರು.

yuva rajkumar 1ನಮ್ಮ ತಂದೆನೇ ಹೇಳಿಬಿಟ್ರು ಅಪ್ಪು ಮಗ ಅಂತ. ನಾನು ಎಲ್ಲೇ ಹೋದರೂ ಜನ ಅಪ್ಪು ಮಗ ಬಂದ. ಅಪ್ಪು ಮಗ ಬಂದ ಅಂತ ಹೇಳುತ್ತಾರೆ. ನನಗೆ ಎಷ್ಟು ಸಂತೋಷ ಆಗುತ್ತದೆ ಗೊತ್ತಾ? ಎಂದು ಯುವ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ. ಅವರು ನನ್ನ ಶಕ್ತಿಯಾಗಿ ನನ್ನ ಜೊತೆ ನಿಂತಿದ್ದಾರೆ. ಅವರು ನನ್ನ ಕೈ ಹಿಡಿದು ನಡೆಸುತ್ತಿದ್ದಾರೆ. ಇಲ್ಲಿವರೆಗೂ ಕರೆದುಕೊಂಡು ಬಂದು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಇನ್ಮುಂದೆ ನೀವು ಹೇಗೆ ಹೇಳ್ತಿರೋ ಹಾಗೆ ಎಂದು ಯುವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

yuva rajkumar 3ಸುಮಾರು ಜನ ಹೇಳುತ್ತಾರೆ. ಏನು ರಾಜ್‌ಕುಮಾರ್ ಕುಟುಂಬ. ಅವರಿಗೇನು ಎಲ್ಲಾ ಸುಲಭ. ಯಾಕೆ ಓದುತ್ತಾರೆ? ಸುಮ್ಮನೆ ಅವರ ತಂದೆ ತಾಯಿ ಹೆಸರು ಕೇಳಿದರೆ ಸಾಕು ಸಿನಿಮಾಗೆ ಬರುತ್ತಾರೆ ಅಂತ. ಆದರೆ, ಅದು ಅಷ್ಟು ಈಸಿಯಾಗಿಲ್ಲ. ನನ್ನ ಸುಮಾರು ವರ್ಷದ ಕನಸು ನಾನು ಇಲ್ಲಿ ಬಂದು ನಿಲ್ಲಬೇಕು ಅಂತ. ಚಿಕ್ಕ ವಯಸ್ಸಿನಿಂದಲೇ ಎಲ್ಲರೂ ಡಿಸೈಡ್ ಮಾಡಿಬಿಟ್ಟರು. ನೀನು ಆ್ಯಕ್ಟರ್ ಆಗ್ತೀಯಾ ಅಂತ. ನನಗೆ ಎಲ್ಲರೂ ನನ್ನ ಫ್ಯೂಚರ್ ಡಿಸೈಡ್ ಮಾಡ್ತಿದ್ದಾರೆ ಅಂದ್ರೆ, ನಾನೇನು ಮಾಡಲಿ. ನನ್ನ ಆಸೆಯೇನು? ಅದಕ್ಕೆ ನಾನು ಸಿನಿಮಾ ಚಿತ್ರರಂಗವೇ ಬೇಡ ಅಂದೆ. ಆದರೆ, ನನ್ನ ಮನಸ್ಸಿನಲ್ಲಿ ಸಿನಿ ಚಿತ್ರರಂಗಕ್ಕೆ ಬರಬೇಕು ಅನ್ನೋ ಆಸೆಯಿತ್ತು ಎಂದಿದ್ದಾರೆ. ನನ್ನ ಆಸೆ ನಾನು ಬಿಡಲ್ಲ. ಕಷ್ಟಪಟ್ಟು ಪ್ರಾಕ್ಟೀಸ್ ಮಾಡಿದೆ ಎಂದು ಯುವ ಮಾತನಾಡಿದ್ದಾರೆ.

 

View this post on Instagram

 

A post shared by Hombale Films (@hombalefilms)

ನಿಮ್ಮ ಮುಂದೆ ಬಂದು ನಿಲ್ಲಬೇಕು ಅಂದರೆ, ಏನಾದ್ರೂ ಒಂದು ಕಾನ್ಫಿಡೆನ್ಸ್ ಇರಬೇಕಲ್ವಾ? ಏನೂ ಮಾಡದೇ ಏನು ಬಂದು ಕಿತ್ತಾಕ್ಲಿ ಇಲ್ಲಿ? ನೀವು ಬಂದು ಕೇಳಲ್ವಾ? ನಿಮಗೆ ಹಕ್ಕಿಲ್ವಾ? ಇವತ್ತು ನಮ್ಮ ಇಡೀ ಮನೆ. ಇಡೀ ಕುಟುಂಬ ನಡೆಯುತ್ತಿರೋದೇ ನಿಮ್ಮಿಂದ. ಇದು ಸತ್ಯವಾದ ಮಾತು. ನಿಮ್ಮೆಲ್ಲರಿಗೂ ಗೊತ್ತು, ನನಗೆ ಬೇರೆ ಕೆಲಸ ಇಲ್ಲ. ನಮಗೆ ಗೊತ್ತಿರೋದೇ ಸಿನಿಮಾ. ನಿಮ್ಮೆಲ್ಲರಿಗೆ ಸಂತೋಷ ಹಾಗೂ ಪ್ರೀತಿ ಕೊಡುವುದೇ ಜವಾಬ್ದಾರಿ ಎಂದು ಯುವ ಹೇಳಿದ್ದಾರೆ.

yuva rajkumar 2

ನಮ್ಮ ಚಿಕ್ಕಪ್ಪ ಯಾವಾಗಲೋ ಹೇಳಿದ್ರಂತೆ ವಿಜಯ್ ಕಿರಗಂದೂರು ಸರ್‌ಗೆ ನೀವು ಗುರು ಸಿನಿಮಾ ಮಾಡಬೇಕು ಅಂತ. ಆ ಮೇಲೆ ನಮ್ಮ ಆಂಟಿ ಹೇಳಿದ್ರು. ನೀವೇ ಗುರುನಾ ಲಾಂಚ್ ಮಾಡಬೇಕು ಅಂತ. ಆ ಮೇಲೆ ಎಷ್ಟೋ ಜನ ಸಂತೋಷ್ ಸರ್‌ಗೆ ನೀವು `ಯುವ’ ಜೊತೆ ಸಿನಿಮಾ ಮಾಡಿ ಅಂತ. ಅದು ನನಗೆ ಗೊತ್ತು. ಈ ಸಿನಿಮಾ ಆಗಿದ್ದೇ ನಿಮ್ಮಿಂದ. ನೀವೇ ಕರೆದುಕೊಂಡು ಬಂದಿದ್ದೀರ. ನೀವೇ ನಿಲ್ಲಿಸಿದ್ದೀರ. ಇಲ್ಲಿಂದ ನೀವು ಹೇಗೆ ಕರಕೊಂಡು ಹೋಗ್ತೀರಾ ಅದು ನಿಮಗೆ ಬಿಟ್ಟಿದ್ದು, ನನಗೆ ದಾರಿ ಕಾಣದೇ ಇರುವ ಸಂದರ್ಭದಲ್ಲಿ ಹೊಂಬಾಳೆ ಸಂಸ್ಥೆ ಸಾಥ್ ನೀಡಿದ್ದಾರೆ ಎಂದು ಯುವ ರಾಜ್‌ಕುಮಾರ್ (Yuva Rajkumar) ಮಾತನಾಡಿದ್ದಾರೆ.

ಅಂದಹಾಗೆ, ‘ಯುವ’ ಸಿನಿಮಾ ಇದೇ ಮಾರ್ಚ್ 29ಕ್ಕೆ ರಿಲೀಸ್ ಆಗುತ್ತಿದೆ. ಯುವಗೆ ನಾಯಕಿಯಾಗಿ ಕಾಂತಾರ ಬೆಡಗಿ ಸಪ್ತಮಿ ಗೌಡ ನಟಿಸಿದ್ದಾರೆ. ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

Share This Article