ಚಿಕ್ಕಮಗಳೂರು: ಫಾಲ್ಸ್ ಬಳಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮಂಗಳೂರು ಮೂಲದ ಯುವಕರಿಗೆ ಗೂಸ ಕೊಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ಬಳಿ ನಡೆದಿದೆ.
ಪ್ರವಾಸಕ್ಕೆ ಎಂದು ಮಂಗಳೂರಿನಿಂದ ಯುವಕ ಹಾಗೂ ಯುವತಿಯರು ಸಿರಿಮನೆ ಫಾಲ್ಸ್ ಗೆ ಬಂದಿದ್ದರು. ಈ ವೇಳೆ ಜಲಪಾತದಲ್ಲಿ ಸ್ನಾನ ಮಾಡುವಾಗ ಯುವಕ- ಯುವತಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಇವರು ಅಸಭ್ಯವಾಗಿ ವರ್ತಿಸುತ್ತಿರುವುದು ನೋಡಿ ಸ್ಥಳೀಯರು ಮುಜುಗರಗೊಂಡಿದ್ದಾರೆ.
ಇವರ ವರ್ತನೆ ಮಿತಿ ಮೀರುತ್ತಿದ್ದಂತೆ ಸ್ಥಳೀಯ ಯುವಕರು ಮಂಗಳೂರು ಮೂಲದ ಪ್ರವಾಸಿಗರಿಗೆ ಗೂಸಾ ನೀಡಿದ್ದಾರೆ. ಯುವಕರ ಜೊತೆ ಪ್ರವಾಸಕ್ಕೆ ಬಂದಿದ್ದ ಯುವತಿಯರಿಗೂ ಸ್ಥಳೀಯರು ಎಲ್ಲರೂ ಸೇರಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಘಟನೆಯಾದ ಬಳಿಕ ಸ್ಥಳೀಯರು ಯುವಕ- ಯುವತಿಯರನ್ನು ಬೇರೆ ಬೇರೆಯಾಗಿ ಕಳುಹಿಸಿದ್ದಾರೆ.