ಸ್ನೇಹಿತನನ್ನು ನೋಡಲು ಬಂದ ಐವರು ಯುವಕರಿಂದ ಕುಡಿದು ದಾಂಧಲೆ!

Public TV
1 Min Read
tmk drink galate collage

ತುಮಕೂರು: ಬಸ್ ಡಿಪೋದಲ್ಲಿ ಸ್ನೇಹಿತನನ್ನು ನೋಡಲು ಬಂದ ಐವರು ಪಾನಮತ್ತ ಯುವಕರು ದಾಂಧಲೆ ನಡೆಸಿದ್ದಾರೆ.

ತುಮಕೂರು ಶಿರಾಗೇಟ್ ನಲ್ಲಿರುವ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ನರಸಿಂಹಮೂರ್ತಿಯನ್ನು ನೋಡಲೆಂದು ಐವರು ಸ್ನೇಹಿತರು ಕಾರಿನಲ್ಲಿ ಬಂದಿದ್ದಾರೆ. ಖಾಸಗಿ ವಾಹನ ಆಗಿದ್ದರಿಂದ ಇವರ ಕಾರು ಡಿಪೋ ಒಳಕ್ಕೆ ಬಿಟ್ಟಿಲ್ಲ.

tmk drink galate 1 e1555901867339

ಮೊದಲೇ ಕುಡಿದ ಅಮಲಿನಲ್ಲಿದ್ದ ಐವರು ಯುವಕರು ಕಾರು ಒಳಗೆ ಬಿಡುವಂತೆ ದಾಂಧಲೆ ನಡೆಸಿದ್ದಾರೆ. ಅಲ್ಲದೆ ಬಸ್ಸುಗಳು ಸಂಚರಿಸದಂತೆ ಅಡ್ಡ ನಿಂತು ತೊಂದರೆ ಮಾಡಿದ್ದಾರೆ. ಡಿಪೋ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಮೂಲಕ ಸುಮಾರು 1 ಗಂಟೆಗಳ ಕಾಲ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಬಳಿಕ ತುಮಕೂರು ನಗರ ಪೊಲೀಸರು ಪಾನಮತ್ತ ಐವರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *