ತುಮಕೂರು: ಬಸ್ ಡಿಪೋದಲ್ಲಿ ಸ್ನೇಹಿತನನ್ನು ನೋಡಲು ಬಂದ ಐವರು ಪಾನಮತ್ತ ಯುವಕರು ದಾಂಧಲೆ ನಡೆಸಿದ್ದಾರೆ.
ತುಮಕೂರು ಶಿರಾಗೇಟ್ ನಲ್ಲಿರುವ ಕೆಎಸ್ಆರ್ ಟಿಸಿ ಡಿಪೋದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ನರಸಿಂಹಮೂರ್ತಿಯನ್ನು ನೋಡಲೆಂದು ಐವರು ಸ್ನೇಹಿತರು ಕಾರಿನಲ್ಲಿ ಬಂದಿದ್ದಾರೆ. ಖಾಸಗಿ ವಾಹನ ಆಗಿದ್ದರಿಂದ ಇವರ ಕಾರು ಡಿಪೋ ಒಳಕ್ಕೆ ಬಿಟ್ಟಿಲ್ಲ.
ಮೊದಲೇ ಕುಡಿದ ಅಮಲಿನಲ್ಲಿದ್ದ ಐವರು ಯುವಕರು ಕಾರು ಒಳಗೆ ಬಿಡುವಂತೆ ದಾಂಧಲೆ ನಡೆಸಿದ್ದಾರೆ. ಅಲ್ಲದೆ ಬಸ್ಸುಗಳು ಸಂಚರಿಸದಂತೆ ಅಡ್ಡ ನಿಂತು ತೊಂದರೆ ಮಾಡಿದ್ದಾರೆ. ಡಿಪೋ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಮೂಲಕ ಸುಮಾರು 1 ಗಂಟೆಗಳ ಕಾಲ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಬಳಿಕ ತುಮಕೂರು ನಗರ ಪೊಲೀಸರು ಪಾನಮತ್ತ ಐವರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.