ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ ಪ್ರಿಯಕರನ ಮೇಲೆ ಯುವಕರು ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಾಗರಾಜ್ ಮಡಿವಾಳ ಹಲ್ಲೆಗೊಳಗಾದ ಪ್ರಿಯಕರ. ನಾಗರಾಜ್ ಹುಬ್ಬಳ್ಳಿಯ ಸೋನಿಯಾ ಗಾಂಧಿ ನಿವಾಸಿಯಾಗಿದ್ದು, ಸದರ ಸೋಪಾ ನಿವಾಸಿ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಈ ಮದುವೆಗೆ ಮೊದಲು ಎರಡು ಕುಟುಂಬವೂ ವಿರೋಧ ವ್ಯಕ್ತಪಡಿಸಿತ್ತು. ಆದರೆ ಮದುವೆಯಾದ ನಂತರ ಎರಡು ಕುಟುಂಬಗಳು ಪ್ರೇಮಿಗಳ ತಂಟೆಗೆ ಬಾರದೇ ಹೇಗಾದರೂ ಚೆನ್ನಾಗಿ ಇರಲಿ ಎಂದು ಕೈಬಿಟ್ಟರು.
ಆದ್ರೆ ಇವರಿಬ್ಬರನ್ನು ಸಮಾಜ ದ್ವೇಷ ಮಾಡುತ್ತಿತ್ತು. ಭಾನುವಾರ ನಾಗರಾಜ್ ಮಡಿವಾಳರ ಸಲೀಂ ಹಾಗೂ ಬಾಬಾಜಾನ್ ಎನ್ನುವ ಯುವಕರು ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ನಾಗರಾಜ್ ಮಡಿವಾಳರ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ನಾಗರಾಜ್ ಮಡಿವಾಳರ ಈ ಹಿಂದೆ ಪ್ರಿಯತಮೆ ಇದ್ದ ಓಣಿಯಲ್ಲಿ ಮನೆಯೊಂದನ್ನು ಕಟ್ಟಿಸುತ್ತಿದ್ದಾನೆ. ಹೀಗಾಗಿ ಆ ಏರಿಯಾದ ಕೆಲವು ಪುಂಡರು ಹೇಗಾದರೂ ಮಾಡಿ ನಾಗರಾಜನಿಗೆ ಬುದ್ಧಿ ಕಲಿಸಬೇಕು ಎಂದು ಇಂತಹ ಕೃತ್ಯವನ್ನು ಮಾಡಿದ್ದಾರೆ. ನಾಗರಾಜ್ ನೀನು ಈ ಏರಿಯಾದಲ್ಲಿ ಮನೆ ಕಟ್ಟಿಸಬೇಡ ಎಂದು ಹಲವು ಬಾರಿ ಅವಾಜ್ ಹಾಕಿದ್ದಾರೆ. ಆದರೂ ಸಹ ನಾಗರಾಜ್ ಅದನ್ನು ಕಡೆಗಣಿಸಿದ್ದನು. ಭಾನುವಾರ ಮಾತನಾಡುತ್ತಾ ನಿಂತಾಗ ಸಲೀಂ ಹಾಗೂ ಬಾಬಾಜಾನ್ ಸೇರಿದಂತೆ ಹಲವರು ಜಗಳ ತೆಗೆದು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv