ತನ್ನ ರಕ್ತದಲ್ಲಿ ಪ್ರಧಾನಿಗೆ 2 ಪತ್ರ ಬರೆದ ಯುವಕ

Public TV
1 Min Read
RCR PM BOOLD LETTAR 1

ರಾಯಚೂರು: ರೈತರು ಎದುರಿಸುತ್ತಿರುವ ಕಷ್ಟಗಳನ್ನ ಪ್ರಧಾನಿ ಮಂತ್ರಿ ಅವರಿಗೆ ಮನವರಿಕೆ ಮಾಡಲು ಜಿಲ್ಲೆಯ ಯುವಕರೊಬ್ಬರು ತನ್ನ ರಕ್ತದಲ್ಲಿ ಎರಡು ಪತ್ರಗಳನ್ನ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

RCR PM BOOLD LETTAR 6

ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ವೀರಭದ್ರಪ್ಪ ಅನ್ನೋ ರೈತನ ಮಗನಾದ ರವಿ ಗೌಡ ತುಂಗಭದ್ರ ಎಡದಂಡೆ ಕಾಲುವೆ ನೀರು ರೈತರಿಗೆ ಸಮರ್ಪಕವಾಗಿ ತಲುಪದ ಹಿನ್ನೆಲೆಯಲ್ಲಿ ರೈತರು ಹೇಗೆ ಕಷ್ಟ ಅನುಭವಿಸುತ್ತಿದ್ದಾರೆ ಅಂತ ಮೂರು ಪುಟದ ಒಂದು ಪತ್ರ ಬರೆದಿದ್ದಾರೆ. ಜೊತೆಗೆ ಪ್ರಾಥಮಿಕ ಪ್ರೌಢ ಶಾಲಾ ಪಠ್ಯಕ್ರಮದಲ್ಲಿ ಇತರೆ ವಿಷಯಗಳಂತೆ ವ್ಯವಸಾಯ ಶಾಸ್ತ್ರವನ್ನು ಅಳವಡಿಸಬೇಕು. ಇದರಿಂದ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲದೆ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ ಅಂತ ಮೂರು ಪುಟಗಳ ಎರಡನೇ ಪತ್ರವನ್ನೂ ಬರೆದಿದ್ದಾರೆ.

RCR PM BOOLD LETTAR 7

ಮಲ್ಲದಗುಡ್ಡ ಗ್ರಾಮದ ನಾನು ರೈತನ ಮಗನಾಗಿ ಇತರ ರೈತರ ಒಳಿತಿಗಾಗಿ ಪ್ರಧಾನಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಅಂತ ರವಿ ಗೌಡ ಹೇಳಿದ್ದಾರೆ.

RCR PM BOOLD LETTAR 5

RCR PM BOOLD LETTAR 4

RCR PM BOOLD LETTAR 2

RCR PM BOOLD LETTAR 3

 

Share This Article
Leave a Comment

Leave a Reply

Your email address will not be published. Required fields are marked *