ಮೈಸೂರು: ಪರಿಚಯಸ್ಥನ ಬೈಕನ್ನೇ ಯುವಕನೊಬ್ಬ ಕದ್ದ ಪ್ರಕರಣ ಮೈಸೂರಿನ ಹೆಬ್ಬಾಳಿನಲ್ಲಿ ನಡೆದಿದೆ.
ಆಕಾಶ್ ಪರಿಚಯಸ್ಥನ ಬೈಕ್ ಕದ್ದ ಖತರ್ನಾಕ್ ಕಳ್ಳ. ಆಕಾಶ್ ಮೂಲತಃ ಬೆಂಗಳೂರಿನವನಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಬುದಾಗಿ ತಿಳಿದುಬಂದಿದೆ. ಆಕಾಶ್ ತನ್ನ ಜೊತೆ ಕೆಲಸ ಮಾಡುತ್ತಿದ್ದ ಸ್ನೇಹಿತನ ಬೈಕನ್ನೇ ಕದ್ದಿದ್ದಾನೆ.
ಕಡಕೊಳ ನಿವಾಸಿ ಸುನೀಲ್ ಜೊತೆ ಆಕಾಶ್ ಕೆಲಸ ಮಾಡುತ್ತಿದ್ದನು. ಇದೀಗ ಸುನೀಲ್ ಬೈಕನ್ನೇ ಕದ್ದು ಸಿಕ್ಕಿಬಿದ್ದಿದ್ದಾನೆ. ಹಾಡುಹಗಲೇ ಕಳ್ಳತನ ನಡೆಸಿದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುನೀಲ್ ಬಳಿಯಿಂದ ಕೀ ಕದ್ದು ನಂತರ ಆತನ ಹೊಸ ಬೈಕಿನೊಂದಿಗೆ ಪರಾರಿಯಾಗಿದ್ದಾನೆ.
ಸದ್ಯ ಈ ಬಗ್ಗೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv