– ಮುಳುಗುತ್ತಿದ್ರೂ ಸಹಾಯಕ್ಕೆ ಯಾರೂ ಬರಲಿಲ್ಲ
– ಯುವಕನ ಕೊನೆಯ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿ: ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಲು ಹೋಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಪ್ಲ್ಯಾಶ್ ಸ್ವಿಮ್ಮಿಂಗ್ ಪೂಲ್ನಲ್ಲಿ ನಡೆದಿದೆ.
ನವಲಗುಂದದ ನಿವಾಸಿ ಸಿರಾಜ್ ಅಣ್ಣಿಗೇರಿ (24) ಮೃತ ಯುವಕ. ಯುವಕ ಮುಳುಗುತ್ತಿದ್ದರೂ ಕೂಡ ಸ್ವಿಮ್ ಟ್ರೈನರ್ ಸುಮ್ಮನೆ ನಿಂತಿದ್ದು, ಈಜಾಡುತ್ತಲೆ ಯುವಕ ಮುಳುಗಿ ಸಾವನ್ನಪ್ಪಿದ್ದಾನೆ.
ಯುವಕ ಮುಳುಗುತ್ತಿದ್ದರೂ ಟ್ರೈನರ್ ಸುಮ್ಮನಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಅಲ್ಲದೇ ಸಿರಾಜ್ ತನ್ನ ಸ್ನೇಹಿತರೊಡನೆ ಈಜಾಡಲು ಬಂದಿದ್ದನು. ಆದರೆ ಯಾರೊಬ್ಬರೂ ಆತನ ಜೊತೆ ಇರಲಿಲ್ಲ. ಹೀಗಾಗಿ ಸಿರಾಜ್ ಸಾವಿನಲ್ಲಿ ಹತ್ತಾರು ಸಂಶಯಗಳು ಸೃಷ್ಟಿಯಾಗಿದೆ.
ಸಿರಾಜ್ ಮದ್ಯಪಾನ ಮಾಡಿರಲಿಲ್ಲ ಎಂದು ಸ್ವಿಮ್ಮಿಂಗ್ ಪೂಲ್ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಯುವಕನ ಸಾವಿನ ಕೊನೆಯ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.