ಯಾದಗಿರಿಯಲ್ಲಿ ಯುವಕರಿಂದ ಮನೆ ಮುಂದೆಯೇ ದಲಿತನ ಹತ್ಯೆ

Public TV
1 Min Read
youth kills a Dalit man over roti in Yadagiri

– 18 ಗಂಟೆಗಳ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ

ಯಾದಗಿರಿ: ಅನ್ಯಕೋಮಿನ ಯುವಕನಿಂದ ದಲಿತ (Dalit) ಯುವಕನ‌ ಹತ್ಯೆಯಾಗಿರುವ ಘಟನೆ ಯಾದಗಿರಿ (Yadagiri) ನಗರದ ಶಹಾಪೂರ ಪೇಟ್ ಬಡಾವಣೆಯಲ್ಲಿ ನಡೆದಿದೆ.

ರಾಕೇಶ್ (22) ಕೊಲೆಯಾಗಿರುವ ಯುವಕನಾಗಿದ್ದು, ಫಯಾಜ್ ಹಾಗೂ ಆಸೀಫ್‌ ಕೊಲೆ ಮಾಡಿರುವ ಆರೋಪಿಗಳು. ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಮನೆ ಮುಂದೆಯೇ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ರಾಕೇಶ್‌ ಕುಟುಂಬಸ್ಥರು ಹೇಳಿದ್ದಾರೆ. ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನೇಹಾ ಹತ್ಯೆಗೆ ವ್ಯಾಪಕ ಖಂಡನೆ – ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ; ವಿದ್ಯಾರ್ಥಿಗಳಿಂದಲೂ ಬೆಂಬಲ

vlcsnap 2024 04 22 18h21m07s268

ರಾಕೇಶ್ ಕೊಲೆ ಪ್ರಕರಣವನ್ನ ಮರೆಮಾಚಲು ಪೊಲೀಸ್ ಇಲಾಖೆ ಯತ್ನ ನಡೆಸಿದೆ. ತಡರಾತ್ರಿ ಕೊಲೆಯಾಗಿದ್ದರೂ ಪೊಲೀಸರು ಕೇಸ್ ದಾಖಲಿಸಿಕೊಂಡಿಲ್ಲ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

youth kills a Dalit man over roti in Yadagiri 1
ಎಫ್‌ಐರ್‌ ಕಾಫಿಯಲ್ಲಿರುವ ದೂರಿನ ವಿವರ

ಈಗ ಹಿಂದೂ ಯುವಕನ ಕುಟುಂಬಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೆಂಗಾವಲಾಗಿ ನಿಂತುಕೊಳ್ಳುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ‌. ಕೂಡಲೇ ಅಲರ್ಟ್ ಆದ ಪೊಲೀಸರು ಕೊಲೆ ನಡೆದ 18 ಗಂಟೆಗಳ ಬಳಿಕ ಕೊಲೆಯಾದ ಯುವಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಗೆಲುವಿನ ಖಾತೆ ತೆರೆದ ಬಿಜೆಪಿ!

ಖುದ್ದು ಎಸ್‌ಪಿ ಸಂಗೀತಾ ಜಿ ಅವರು ಸ್ಥಳದಲ್ಲೇ ನಿಂತು ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

 

Share This Article