ಲಗ್ನಪತ್ರಿಕೆ ಹಂಚಲು ಹೋದಾಗ ಸಿಕ್ಕಿದ್ಳು ಹಳೇ ಪ್ರಿಯತಮೆ- ವಿವಾಹದ ಮರುದಿನವೇ ಯುವಕ ಆತ್ಮಹತ್ಯೆ!

Public TV
1 Min Read
dfgdfg

ಮೈಸೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆ ಯುವಕ ಮೇ 8 ನೇ ತಾರೀಖು ತನ್ನ ಅತ್ತೆ ಮಗಳನ್ನು ಮದುವೆ ಆಗಬೇಕಿತ್ತು. ಆದರೆ, ವಿಧಿಯಾಟ ಬೇರೆ ಇತ್ತು. ಮದುವೆ ಕಾರ್ಡ್ ಹಂಚಲು ಮೈಸೂರಿಗೆ ಬಂದ ಅವನನ್ನು ಹಳೆ ಪ್ರಿಯತಮೆ ಪತ್ತೆ ಹಚ್ಚಿ ಮೇ 3 ರಂದು ದಿಢೀರನೆ ಅವನಿಂದ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಂಡಳು. ಇದರಿಂದ ಮನನೊಂದ ಯುವಕ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

vlcsnap 2017 05 05 14h34m59s24

ಹೀಗೆ ಸಾವಿಗೆ ಶರಣಾದ ಯುವಕನ ಹೆಸರು ಮಠಪತಿ. ಕೆಎಸ್‍ಆರ್‍ಟಿಸಿ ಕಂಡಕ್ಟರ್ ಆಗಿರೋ ಮಠಪತಿಗೆ ತನ್ನ ಅತ್ತೆ ಮಗಳ ಜೊತೆ ಮೇ 8 ರಂದು ರಾಣೆಬೆನ್ನೂರಿನಲ್ಲಿ ಮದುವೆ ನಿಶ್ಚಿಯವಾಗಿತ್ತು. ಇದಕ್ಕಾಗಿ ಸ್ನೇಹಿತರನ್ನು ಕರೆಯಲು ಮಠಪತಿ ಮೈಸೂರಿಗೆ ಬಂದಿದ್ದರು. ಆಗ, ಬೆಂಗಳೂರಿನಲ್ಲಿ ತಾನು ಡಿಎಡ್ ಓದುವಾಗ ಪ್ರೀತಿಸುತ್ತಿದ್ದ ಕಾವ್ಯಶ್ರೀ ಕಣ್ಣಿಗೆ ಬಿದ್ದಿದ್ದಾರೆ.

MYS MARRAIGE

ಕಾವ್ಯಶ್ರೀ ಈಗ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದಾರೆ. ಕಾವ್ಯಶ್ರೀ ಅಪ್ಪ-ಅಮ್ಮ ಮೈಸೂರಲ್ಲೆ ಇದ್ದಾರೆ. ಹೀಗಾಗಿ, ಮೊನ್ನೆ ಮೈಸೂರಿಗೆ ಬಂದಿದ್ದ ಮಠಪತಿಯನ್ನು ಪತ್ತೆಹಚ್ಚಿದ ಕಾವ್ಯಶ್ರೀ, ತನ್ನನ್ನು ಮದುವೆ ಆಗುವಂತೆ ಒತ್ತಾಯಿಸಿ ಮೇ 3 ರಂದು ಮೈಸೂರಿನ ದೇವಸ್ಥಾನದಲ್ಲಿ ಮದುವೆ ಆಗಿದ್ದಾಳೆ. ಇದರಿಂದ ಬೇಸತ್ತ ಮಠಪತಿ ತಾನು ಉಳಿದಿದ್ದ ಮನೆಯಲ್ಲೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

vlcsnap 2017 05 05 14h34m18s124

vlcsnap 2017 05 05 14h34m03s212

vlcsnap 2017 05 05 14h33m52s122

vlcsnap 2017 05 05 14h33m39s222

Share This Article
Leave a Comment

Leave a Reply

Your email address will not be published. Required fields are marked *