ಯುಗಾದಿ ಹಬ್ಬಕ್ಕೆ ಅಕ್ಕನ ಮಕ್ಕಳನ್ನು ಕರೆದೊಯ್ಯುವಾಗ ಬೈಕಿಗೆ KSRTC ಬಸ್ ಡಿಕ್ಕಿ- ಯುವಕ ಸಾವು, ಚಾಲಕ ಪರಾರಿ

Public TV
0 Min Read
CKB ACCIDENT DEATH COLLAGE

ಚಿಕ್ಕಬಳ್ಳಾಪುರ: ಬೈಕಿಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಡಬಲ್ ರೋಡ್ ನಲ್ಲಿ ನಡೆದಿದೆ.

ಅಂಜಿ(18) ಸಾವನ್ನಪ್ಪಿದ್ದ ಯುವಕ. ಅಫಘಾತದಲ್ಲಿ ಮತ್ತಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುಗಾದಿ ಹಬ್ಬ ಎಂದು ತನ್ನ ಇಬ್ಬರು ಅಕ್ಕನ ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಅಂಜಿ ಮೃತಪಟ್ಟಿದ್ದಾನೆ.

ಈ ಘಟನೆ ನಂತರ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದು, ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CKB ACCIDENT DEATH 2

CKB ACCIDENT DEATH 3

CKB ACCIDENT DEATH

Share This Article
Leave a Comment

Leave a Reply

Your email address will not be published. Required fields are marked *