ಎಲ್ಲೇ ಇರು ಚೆನ್ನಾಗಿರು, ಐ ಲವ್ ಯು ಕಣೇ – ಯುವಕ ಸೂಸೈಡ್

Public TV
1 Min Read
Still

ತುಮಕೂರು: ಪ್ರೀತಿಗೆ ಜಾತಿ ಅಡ್ಡಬಂದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ತಾನು ಸೂಸೈಡ್ ಮಾಡಿಕೊಳ್ಳವುದಾಗಿ ಫೇಸ್ ಬುಕ್ ನಲ್ಲಿ ವಿಡಿಯೋ ಹೇಳಿಕೆ ದಾಖಲಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದ ಕ್ಯಾತಸಂದ್ರದಲ್ಲಿ ನಡೆದಿದೆ.

26 ವರ್ಷದ ರಾಘವೇಂದ್ರ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ರಾಘವೇಂದ್ರ ತಿಪಟೂರಿನಲ್ಲಿ ಡಿಪ್ಲೋಮಾ ಓದುತ್ತಿದ್ದಾಗ ಕಳೆದ ಐದು ವರ್ಷದಿಂದ ತುರುವೇಕೆರೆ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಆಕೆಯೂ ಈ ಯುವಕನನ್ನು ಪ್ರೀತಿಸುತ್ತಿದ್ದಳು. ರಾಘವೇಂದ್ರ ಖಾಸಗಿ ಕಂಪೆನಿಯಲ್ಲಿ ಕೆಲಸ ಕೂಡಾ ಮಾಡುತ್ತಿದ್ದನು.

ಈ ನಡುವೆ ಇಬ್ಬರು ಪ್ರೇಮಿಗಳು ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ ಇವರಿಬ್ಬರ ಜಾತಿ ಬೇರೆ ಬೇರೆಯಾಗಿತ್ತು. ಯುವಕ ಮದುವೆ ಬಗ್ಗೆ ಯುವತಿಯ ತಂದೆಯ ಜೊತೆ ಮಾತನಾಡಿದ್ದಾನೆ. ಆದರೆ ಯುವತಿ ತಂದೆ ಜಾತಿ ಮುಂದಿಟ್ಟುಕೊಂಡು ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಯುವಕ ವಿಡಿಯೋ ರೆಕಾರ್ಡ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಡಿಯೋದಲ್ಲಿ ಏನಿದೆ?:
“ಜಾತಿ ಜಾತಿ ಅಂಥಾ ಯಾಕೆ ಸಾಯ್ತೀರಾ, ಸತ್ತಾಗ ಜಾತಿನ ಹೊತ್ತುಕೊಂಡು ಹೋಗತ್ತೀರಾ. ಬದುಕಿದ್ದಾಗಲೇ ನನ್ನನ್ನು ಸಾಯಿಸ್ತಿದಿಯಾ, ನಿನ್ನ ಮಗಳನ್ನು ಸಾಯಿಸ್ತಿದಿಯಾ. ಇದೆಲ್ಲಾ ಏನಿಕಪ್ಪ. ಕೊನೆದಾಗಿ ಅವಳಿಗೂ ಹೇಳಿದ್ದೇನೆ. ಇನ್ನು ಯಾವತ್ತೂ ನಿನ್ನ ಮುಂದೆ ಬರಲ್ಲ ಎಂದು ಹೇಳಿದ್ದೇನೆ. ಆದರೆ ಹೇಳಿದಂಗೆ ನಡೆದುಕೊಳ್ಳಲು ಸಾಧ್ಯವಿಲ್ಲ. ನಾನು ಫೇಕ್ ಲವ್ ಮಾಡಿಲ್ಲ.

ನಾನು ಬದುಕಿದ್ದರೆ ನಾನು ಅವಳನ್ನು ನೋಡಲು ಬರುತ್ತೇನೆ. ಆಗ ಅವಳಿಗೆ ಹೊಡೆಯುವುದು. ಅವಳು ನೋವು ಅನುಭವಿಸುವುದು ಇರಲ್ಲ. ನಾನಿನ್ನು ನಿನ್ನ ಮಗಳ ತಂಟೆಗೆ ಬರಲ್ಲಾ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವಳು ಎಲ್ಲೆ ಇದ್ದರೂ ಚೆನ್ನಾಗಿರಲಿ. ಐ ಲವ್ ಯು ಕಣೇ ಎಂದು ಯುವತಿಗೆ ಹೇಳಿದ್ದಾನೆ.

ಈ ಕುರಿತು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *