ಮಂಡ್ಯ: ಮುತ್ತು ಕೊಡುವ ಚಾಲೆಂಜ್ ಮಾಡಿ ಯುವಕರು ಪೊಲೀಸರ ಅತಿಥಿಯಾಗಿರುವ ಘಟನೆ ಬುಧವಾರ ಸಂಜೆ ಮಂಡ್ಯದ ಗ್ರಾಮವೊಂದರಲ್ಲಿ ನಡೆದಿದೆ.
ಪ್ರಮೋದ್(22) ಮತ್ತು ವೆಂಕಟೇಶ್(24) ಮುತ್ತು ನೀಡಲು ಮುಂದಾದ ಯುವಕರು. ಪ್ರಮೋದ್ ಹಾಗೂ ವೆಂಕಟೇಶ್ ನಡುವೆ ಗ್ರಾಮದ 10 ವರ್ಷದ ಬಾಲಕಿಗೆ ಮುತ್ತು ಕೊಡುವ ಚಾಲೆಂಜ್ ನಡೆದಿತ್ತು. ಅಲ್ಲದೇ ಬಾಲಕಿ ಶಾಲೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಯುವಕರು ಆಕೆಗೆ ಮುತ್ತು ನೀಡಲು ಮುಂದಾಗಿದ್ದಾರೆ.
ಯುವಕರು ಮುತ್ತು ನೀಡಲು ಬಂದಾಗ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಬಾಲಕಿಯ ಚೀರಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರಮೋದ್ ಸ್ಥಳದಿಂದ ಪರಾರಿ ಆಗಿದ್ದು, ವೆಂಕಟೇಶ್ನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಈ ಬಗ್ಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv