ಭುವನೇಶ್ವರ್: ಪೋಷಕರು ತಮ್ಮ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವ ಜೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ರಾತ್ರಿ ಒಡಿಶಾದ ನಬರಂಗ್ಪುರ ಜಿಲ್ಲೆಯ ಪಂದಿಕೋಟೆ ಗ್ರಾಮದಲ್ಲಿ ನಡೆದಿದೆ.
ಬಾನಾಬಸಿ ದಂದಸೇನ(20) ಹಾಗೂ ಸ್ವಾತಿ ಪೈಕ(19) ನೇಣಿಗೆ ಶರಣಾದ ಯುವ ಜೋಡಿ. ಬಾನಾಬಸಿ ಹಾಗೂ ಸ್ವಾತಿ ಕೆಲವು ತಿಂಗಳಿನಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಯನ್ನು ಇಬ್ಬರ ಕುಟುಂಬದವರು ನಿರಾಕರಿಸಿದ್ದಾರೆ.
ಪೋಷಕರು ತಮ್ಮ ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಬಾನಾಬಸಿ ಹಾಗೂ ಸ್ವಾತಿ ಖಿನ್ನತೆಗೊಳಗಾಗಿದ್ದರು. ಅಲ್ಲದೇ ಕಳೆದ ರಾತ್ರಿ ಗ್ರಾಮದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಬೆಳಗ್ಗೆ ಸ್ಥಳೀಯರು ಯುವ ಜೋಡಿಯ ಮೃತದೇಹವನ್ನು ನೋಡಿ ಗ್ರಾಮಸ್ಥರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv