ಬಲು ಮಾತಾಡ್ತಿಯಾ, ಮುಚ್ಚೋ ಬಾಯಿ- ಮಂಡ್ಯದಲ್ಲಿ ಗರಂ ಆದ ಸಾರಿಗೆ ಸಚಿವ

Public TV
1 Min Read
MND

ಮಂಡ್ಯ: ತಡಿಲಾ ಗೌಡ, ಬಲು ಮಾತಾಡ್ತಿಯಾ ಕಣ್ಲ ನೀನು. ನಿನ್ನಂತವರು ನನ್ನತ್ರಾನೂ ಇದ್ದಾರೆ. ಸ್ವಲ್ಪ ಸುಮ್ನಿರ್ಲಾ. ಹೀಗಂತ ವ್ಯಕ್ತಿಯೊಬ್ಬರ ವಿರುದ್ಧ ಸಾರಿಗೆ ಸಚಿವ ಹೆಚ್‍ಎಂ ರೇವಣ್ಣ ಗರಂ ಆಗಿದ್ದಾರೆ.

ಮಂಡ್ಯದ ಮದ್ದೂರಿನ ಕೊಪ್ಪ ಸಾರಿಗೆ ಬಸ್ಸ್ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಸಚಿವರು ಭಾಷಣ ಪ್ರಾರಂಭಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಗಲಾಟೆ ಮಾಡಲು ಶುರು ಮಾಡಿದ್ದ. ಕೋಪಗೊಂಡ ಸಚಿವರು ಮೊದಲೆರಡು ಬಾರಿ ಸಮಾಧಾನವಾಗಿಯೇ ತಡಿಲಾ ಗೌಡ, ಬಲು ಮಾತಾಡ್ತಿಯ ಕಣ್ಲಾ ನೀನು ಅಂತ ಹೇಳಿದ್ರು.

ಆದ್ರೂ ಆತ ಸುಮ್ಮನಿರದಿದ್ದಾಗ ಗರಂ ಆದ ಸಚಿವರು, ಅಯ್ಯೋ ನಿನ್ನ ಅವಾಗ್ಲಿಂದ ನೀನ್ ಒಬ್ಬನೆ ಮಾತಾಡ್ತಿದ್ದೀಯಾ. ಮುಚ್ಚೋ ಬಾಯಿ, ಸಭೆಯನ್ನ ಹಾಳು ಮಾಡಬಾರದು ಅಂತ ಸ್ಟ್ರಾಂಗ್ ಆಗಿ ಗದರಿದ್ರು.

MND 1

MND 2

MND 3

MND 4

vlcsnap 2018 01 23 07h11m20s117

vlcsnap 2018 01 23 07h11m29s207

Share This Article
Leave a Comment

Leave a Reply

Your email address will not be published. Required fields are marked *