ಬೆಂಗಳೂರು: ಹಾಡುಗಳ ಮೂಲಕವೇ ಹವಾ ಸೃಷ್ಟಿಸೋ ಚಿತ್ರಗಳೆಲ್ಲ ಗೆಲುವು ದಾಖಲಿಸುತ್ತವೆಂದು ನಂಬಿಕೆಯಿದೆ. ಈ ಸೂತ್ರದ ಆಧಾರದಲ್ಲಿ ಹೇಳೋದಾದರೆ ರಘುನಾಥ್ ನಿರ್ಮಾಣದ ಯಾರಿಗೆ ಯಾರುಂಟು ಚಿತ್ರದ ಗೆಲುವೂ ನಿಚ್ಚಳವಾದಂತಿದೆ. ಈ ಚಿತ್ರದ ಹಾಡುಗಳೆಲ್ಲ ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ. ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆಗೆ ತಯಾರಾಗಿ ನಿಂತಿರೋ ಯಾರಿಗೆ ಯಾರುಂಟು ಬಗ್ಗೆ ನಿರ್ದೇಶಕ ಯೋಗರಾಜ ಭಟ್ ಮೆಚ್ಚುಗೆಯ ಮಾತಾಡುತ್ತಲೇ ಶುಭ ಹಾರೈಸಿದ್ದಾರೆ.
ಹುಮ್ಮಸ್ಸು ಹೊಂದಿರೋ ತಂಡವೊಂದರಿಂದ ರೂಪುಗೊಂಡಿರೋ ಈ ಚಿತ್ರ ಯಾರಿಗೆ ಯಾರುಂಟು ಎರವಿನ ಸಂಸಾರ ಎಂಬ ದಾಸವಾಣಿಯ ಸಾಲುಗಳನ್ನು ಹೊಂದಿರೋ ಚಿತ್ರ. ಸಂಗೀತವನ್ನೂ ಪ್ರಧಾನವಾಗಿಸಿಕೊಂಡಿರೋ ಇದು ತಮ್ಮ ಪರಿಚಿತರನೇಕರು ಸೇರಿ ಮಾಡಿರೋ ಚಿತ್ರ. ಎಲ್ಲರೂ ನೋಡಿ ಈ ಪ್ರಯತ್ನವನ್ನು ಗೆಲ್ಲಿಸಬೇಕಾಗಿ ಯೋಗರಾಜ ಭಟ್ ಕೇಳಿಕೊಂಡಿದ್ದಾರೆ.
ಕಿರಣ್ ಗೋವಿ ನಿರ್ದೇಶನದ ಈ ಚಿತ್ರ ಯೋಗರಾಜ ಭಟ್ ಮಾತಿನಂತೆಯೇ ಬದುಕಿನ ನಾನಾ ಮಗ್ಗುಲುಗಳನ್ನು ಭರ್ಜರಿ ಮನರಂಜನೆಯೊಂದಿಗೆ ತೆರೆದಿಡುವ ಚಿತ್ರ. ಈಗಾಗಲೇ ಇದರ ಅಸಲಿ ಕಥೆಯೇನು ಅಂತ ಪ್ರೇಕ್ಷಕರು ಚರ್ಚಿಸಲಾರಂಭಿಸಿದ್ದಾರೆ. ಒರಟ ಪ್ರಶಾಂತ್ ಮೂರು ವರ್ಷದ ಬಳಿಕ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋ ಕಾತರ ಹೊಂದಿದ್ದಾರೆ. ಕೃತಿಕಾ ರವೀಂದ್ರ, ಲೇಖಾ ಚಂದ್ರ ಮತ್ತು ಅದಿತಿ ರಾವ್ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv