ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ ವಿಶ್ವದ ಮೂಲೆ ಮೂಲೆನಲ್ಲೂ ಯಶ್ ಮೇನಿಯಾ ಶುರುವಾಗಿದೆ. `ಕೆಜಿಎಫ್’ ಸ್ಟಾರ್ ಆಗೋಕು ಮುಂಚೆ ಯಶ್ ನಡೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಕಠಿಣ ಶ್ರಮ, ಅವಮಾನ, ಛಲದಿಂದಲೇ ಯಶ್ ಮುನ್ನುಗಿದ್ದಾರೆ. ನನ್ನ ಯಾರು ಕರೆದು ಹೀರೋ ಮಾಡಲಿಲ್ಲ ಅಂತಾ ತೆರೆ ಹಿಂದಿನ ಅಸಲಿ ಕಥೆಯನ್ನ ಪಬ್ಲಿಕ್ ಟಿವಿ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ನಟ ಯಶ್ ಮಾತಾನಾಡಿದ್ದಾರೆ.
ನನ್ನ ಬಂದು ಹೀರೋ ಆಗು ಅಂತಾ ಯಾರು ಕರೆಯಲಿಲ್ಲ. ಆಕ್ಟರ್ ಆದ ಮೇಲೆ ಕೆಲವು ಇರುತ್ತೆ. ಇವ್ರು ಹೀಗೆ ಇರಬೇಕು,ಇದೇ ರೀತಿ ಜೀವನ ನಡೆಸಬೇಕು. ನಾನು ಕಲಾವಿದನಾಗಬೇಕು ಅಂತಾ ಬಂದ ಮೇಲೆ ನನ್ನ ವಯಕ್ತಿಕ ಜೀವನ ಕೂಡ ಪಬ್ಲಿಕ್ ಆಗಿರುತ್ತೆ, ಎಲ್ಲವನ್ನು ಅಭಿಮಾನಿಗಳು ಜಡ್ಜ್ ಮಾಡುತ್ತಾರೆ. ಇದನ್ನು ಓದಿ:EXCLUSIVE INTERVIEW- ಕೆಜಿಎಫ್ 2 ಸಿನಿಮಾ ಯಾಕೆ ನೋಡ್ಬೇಕು? : ಯಶ್ ಕೊಟ್ಟ ಉತ್ತರ ಹೀಗಿದೆ
ನಾವು ಅಣ್ಣಾವ್ರು ಹುಟ್ಟಿರೋ ನಾಡಲ್ಲಿ ಇರೋದು, ನಾವು ಅವರಿಗೆ 10% ಕಂಪೇರ್ ಮಾಡೋಕೆ ಆಗಲ್ಲ. ನಾನು ಅಣ್ಣಾವ್ರರಷ್ಟು ಸಿಂಪಲ್ ಆಗಿ ಬದುಕುತ್ತಿನಿ ಅಂತಾಲ್ಲ. ನುಗ್ಗಬೇಕು, ಮನುಷ್ಯ ಒಂಥರಾ ಸ್ಟ್ರಾಂಗ್ ಆಗಿ ಇರಬೇಕು. ನನ್ನತನ ನನ್ನ ಯೋಚನೆ ಇಟ್ಕೊಂಡು ಹೇಗೆ ಕೆಲಸ ಮಾಡಬಹುದು ಅಂತಾ ಹೆಜ್ಜೆ ಇಡೋದರ ಕುರಿತು ನಟ ಯಶ್ ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ್ದಾರೆ.