ಯಾದಗಿರಿ: ಬೀಜ ಉತ್ಪಾದನೆಯಲ್ಲಿ ನಿರ್ಲಕ್ಷ್ಯ ತೋರಿದ ಕೃಷಿ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ವ್ಯವಸಾಯದ ಬಗ್ಗೆ ಭರ್ಜರಿ ಪಾಠ ಮಾಡಿದ್ದಾರೆ.
ಯಾದಗಿರಿ ನಗರದ ಹೊರ ವಲಯದಲ್ಲಿ ಸುಮಾರು 35 ಎಕರೆ ಸರ್ಕಾರಿ ಭೂಮಿದ್ದು, ಇದರಲ್ಲಿ ಬೀಜ ಉತ್ಪಾದನಾ ಕೇಂದ್ರವಿದೆ. ಬೀಜ ಉತ್ಪಾದನೆಗಾಗಿ ಜಿಲ್ಲಾಡಳಿತದಿಂದ ವರ್ಷ ಲಕ್ಷ-ಲಕ್ಷ ಅನುದಾನ ಸಹ ನೀಡಲಾಗುತ್ತದೆ. ಹೀಗಿದ್ದರೂ ಬೀಜ ಉತ್ಪಾದನೆ ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ.
ಅಲ್ಲದೆ ಸಾಕಷ್ಟು ಜಮೀನು ಇದ್ದರು ಕೇವಲ ಕಾಟಾಚಾರಕ್ಕೆ ಬೆಳೆ ಬೆಳೆಯುತ್ತಿದ್ದಾರೆ. ಅಧಿಕಾರಗಳ ಬೇಜಾವಾಬ್ದಾರಿಗೆ ಬೇಸತ್ತ ಶಾಸಕ ಮುದ್ನಾಳ, ಜಿಲ್ಲಾ ಕೃಷಿ ಮುಖ್ಯಾಧಿಕಾರಿ ದೇವಿಕಾ ಮತ್ತು ಇಲಾಖೆ ಪ್ರಮುಖ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಬೆಳೆಯನ್ನು ಹೇಗೆ ಬೆಳೆಯಬೇಕು, ಹೊಲವನ್ನು ಹೇಗೆ ಉಳುಮೆ ಮಾಡಬೇಕು ಎಂದು ಹೇಳಿಕೊಟ್ಟು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.