ಯಾದಗಿರಿ: ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳೂರಿನಲ್ಲಿ ಇಂದು ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮಹಮದ್ ಕಬೀರ್ (30) ಸಾವನ್ನಪ್ಪಿದ ಕಾರ್ಮಿಕ. ಇಂದು ಕಬೀರ್ ಮತ್ತು ಆತನ ಸ್ನೇಹಿತ ಟ್ಯಾಂಕ್ನನ್ನು ಡೆಮಾಲಿಶ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಟ್ಯಾಂಕ್ ಈ ಇಬ್ಬರೂ ಕಾರ್ಮಿಕರ ಮೇಲೆ ಕುಸಿದು ಬಿದ್ದಿದೆ.
ಘಟನೆಯಲ್ಲಿ ಓರ್ವ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹತ್ತಾರು ವರ್ಷದ ಹಳೆಯ ಟ್ಯಾಂಕ್ ಇದಾಗಿದ್ದು, ತಾಳಿಕೋಟಿ ಮೂಲದ ಅಶ್ಪಾಕ್ ಎಂಬವರಿಗೆ ಜಿಲ್ಲಾಡಳಿತ, ಟ್ಯಾಂಕರ್ ಕೆಡವಲು ಟೆಂಡರ್ ನೀಡಿತ್ತು. ಮುಂಜಾಗ್ರತೆಯ ಇಲ್ಲದೆ ಬೃಹತ್ ಟ್ಯಾಂಕ್ ಕೆಡುವಲು ಗುತ್ತಿಗೆದಾರ ಮುಂದಾಗಿರುವುದೆ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತದೆ.
ಸದ್ಯ ಘಟನಾ ಸ್ಥಳಕ್ಕೆ ಕೊಡೆಕಲ್ ಪೊಲೀಸರು ಭೇಟಿ ನೀಡಿದ್ದು, ಟ್ಯಾಂಕ್ ಅಡಿಯಲ್ಲಿ ಸಿಲುಕಿದ ಕಾರ್ಮಿಕನ ಮೃತ ದೇಹ ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ.