Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ವಿಶ್ವದಲ್ಲೇ ಮೊದಲು; ಜಪಾನ್‌ನಿಂದ ಬಾಹ್ಯಾಕಾಶಕ್ಕೆ ಮರದ ಉಪಗ್ರಹ ಉಡಾವಣೆ

Public TV
Last updated: November 12, 2024 9:34 pm
Public TV
Share
4 Min Read
Wooden Satellite Japan 2
SHARE

-ಚಂದ್ರ, ಮಂಗಳನ ಅಂಗಳದಲ್ಲಿ ಮನೆ ಕಟ್ಟುವ ಗುರಿ

ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಮರ ಬಳಸಿ ಮನೆ ಕಟ್ಟುವ ಯೋಜನೆಯನ್ನು ಹೊಂದಿರುವ ವಿಜ್ಞಾನಿಗಳು, ಇದರ ಸಾಧ್ಯಾಸಾಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಬಾಹ್ಯಾಕಾಶಕ್ಕೆ ಮರದಿಂದ ತಯಾರಿಸಿದ ಉಪಗ್ರಹ ʼಲಿಗ್ನೋಸ್ಯಾಟ್‌ʼ ಉಡಾವಣೆ ಮಾಡಿದ್ದಾರೆ. ಇದು ವಿಶ್ವದಲ್ಲೇ ಮೊದಲ ಮರದ ಉಪಗ್ರಹ ಎಂಬ ಖ್ಯಾತಿ ಪಡೆದುಕೊಂಡಿದೆ. ಹೇಗಿದೆ ಈ ಉಪಗ್ರಹ? ಉಪಗ್ರಹದಲ್ಲಿ ಮರದ ಬಳಕೆ ಏಕೆ? ವಿಜ್ಞಾನಿಗಳ ಯೋಜನೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಹೆಸರು ಹೇಗೆ ಬಂತು?
ಮರ ಎಂಬುದಕ್ಕೆ ಲ್ಯಾಟಿನ್‌ ಭಾಷೆಯಲ್ಲಿರುವ ಪದವನ್ನು ಬಳಸಿ ʼಲಿಗ್ನೋಸ್ಯಾಟ್‌ʼ ಎಂಬ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿದೆ. ಜಪಾನ್‌ನ ಕ್ಯೋಟೋ ವಿವಿ ಮತ್ತು ಸುಮಿಟಾಮೋ ಫಾರೆಸ್ಟ್ರಿ ಸೇರಿ ತಯಾರು ಮಾಡಿರುವ ಈ ಉಪಗ್ರಹವನ್ನು ಅಮೆರಿಕದ ಸ್ಪೇಸ್‌ಎಕ್ಸ್‌ನ ರಾಕೆಟ್‌ ಮೂಲಕ ನವೆಂಬರ್‌ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆ ಮಾಡಲಾಗಿದೆ. ಬಳಿಕ ಇದನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Wooden Satellite Japan

ಈ ಉಪಗ್ರಹ ಕೇವಲ ಅಂಗೈ ಅಗಲವಿದೆ. ಬಾಹ್ಯಾಕಾಶಕ್ಕೆ ಕಳುಹಿಸುವ ನವೀಕರಿಸಬಹುದಾದ ವಸ್ತುವಿನ ಮೇಲೆ ಕಾಸ್ಮಿಕ್‌ ಪರಿಣಾಮ ಏನಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಾಗೂ ಇದರ ಮೂಲಕ ಬಾಹ್ಯಾಕಾಶದಲ್ಲಿ ಮನುಷ್ಯದ ಜೀವನ ಕುರಿತ ಅಧ್ಯಯನ ಕೈಗೊಳ್ಳಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಕ್ಯೋಟೋ ಸಂಸ್ಥೆಯ ಪ್ರಮುಖ ಗುರಿ ಚಂದ್ರ ಮತ್ತು ಮಂಗಳನ ಮೇಲೆ ಮರದಿಂದ ಮನೆ ನಿರ್ಮಾಣ ಮಾಡುವುದಾಗಿದೆ. ಇದಕ್ಕಾಗಿ 50 ವರ್ಷಗಳ ಗುರಿ ಹಾಕಿಕೊಳ್ಳಲಾಗಿದ್ದು, ನಾಸಾ ಪ್ರಮಾಣಿತ ಮರದ ಉಪಗ್ರಹವನ್ನು ತಯಾರು ಮಾಡುವ ಉದ್ದೇಶವಿದೆ. ಪ್ರಸ್ತುತ ಈ ಉಪಗ್ರಹವನ್ನು ಜಪಾನ್‌ನಲ್ಲಿ ಸಿಗುವ ಮ್ಯಾಗ್ನೊಲಿಯಾ ಹೊನೊಕಿ ಎಂಬ ಮರದಲ್ಲಿ ತಯಾರಿಸಲಾಗಿದೆ ಎಂದು ವಿಜ್ಞಾನಿ ಟಾಕೋ ಡಾಯ್‌ ಹೇಳಿದ್ದಾರೆ.

ಮುಂದಿನ 6 ತಿಂಗಳು ಈ ಉಪಗ್ರಹ ಭೂಮಿಯ ಸುತ್ತ ಸುತ್ತುತ್ತದೆ. ಬಾಹ್ಯಾಕಾಶದಲ್ಲಿ ಮರದ ಬಾಳ್ವಿಕೆಯನ್ನು ಮೌಲ್ಯಮಾಪನ ಮಾಡಿ ಡೇಟಾವನ್ನು ಸಂಗ್ರಹಿಸುತ್ತದೆ. ಈ ಡೇಟಾವು ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಮರವನ್ನು ಬಳಸುವ ಕಾರ್ಯಸಾಧ್ಯತೆಯನ್ನು ನಿರ್ಧರಿಸಲು ನಿರ್ಣಾಯಕವಾಗಿದೆ.

Wooden Satellite Japan 3

ಲೋಹದ ಉಪಗ್ರಹಗಳು ಮರು-ಪ್ರವೇಶದ ಸಮಯದಲ್ಲಿ ಅಲ್ಯೂಮಿನಿಯಂ ಆಕ್ಸೈಡ್ ಅನ್ನು ಬಿಡುತ್ತವೆ, ಆದರೆ ಮರದ ಉಪಗ್ರಹಗಳ ಸಂದರ್ಭದಲ್ಲಿ ಇದು ಕಡಿಮೆ ಮಾಲಿನ್ಯವನ್ನು ಉಂಟುಮಾಡುತ್ತದೆ ಮತ್ತು ಕಡಿಮೆ ಪರಿಸರದ ಹೆಜ್ಜೆಗುರುತನ್ನು ಉಂಟುಮಾಡುತ್ತದೆ.

ಬಾಹ್ಯಾಕಾಶದಲ್ಲಿ ಪ್ರತಿ 45 ನಿಮಿಷಗಳಿಗೊಮ್ಮೆ ಸೂರ್ಯನ ಬೆಳಕು ಹಾಗೂ ಕತ್ತಲು ಆವರಿಸುವುದರಿಂದ ಮೈನಸ್‌ 100 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಿಂದ 100 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ಬದಲಾಗುತ್ತದೆ. ಕಕ್ಷೆಗೆ ಸೇರಿದ ಬಳಿಕ ಈ ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್‌ ಉಪಕರಣಗಳು ಅಲ್ಲಿನ ಪರಿಸರದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಮಾಹಿತಿಯನ್ನು ನಿರಂತರವಾಗಿ ಭೂಮಿ ಮೇಲಿರುವ ಕೇಂದ್ರಕ್ಕೆ ಕಳುಹಿಸುತ್ತದೆ.

ಮರದ ಬಳಕೆ ಏಕೆ?
*ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದಿರುವುದರಿಂದ ಮರ ಬೇಗ ಹಾಳಾಗಲ್ಲ
*ಬಾಹ್ಯಾಕಾಶದಲ್ಲಿ ಕಸವನ್ನು ಕಡಿಮೆ ಮಾಡುವ ಉದ್ದೇಶ
*ಮರದ ಉಪಗ್ರಹ ಭೂಮಿ ತಲುಪುವ ಸಮಯದಲ್ಲಿ ಉರಿದುಹೋಗುತ್ತದೆ. ಹೀಗಾಗಿ ಪರಿಸರಕ್ಕೆ ಹಾನಿ ತಪ್ಪಿಸಬಹುದು
*ಲೋಹದ ಉಪಗ್ರಹಗಳು ವಾತಾವರಣಕ್ಕೆ ಬಿಡುಗಡೆ ಮಾಡುವ ಅಲ್ಯುಮಿನಿಯಂ ಆಕ್ಸೆ„ಡ್‌ ಇದರಲ್ಲಿ ಬಿಡುಗಡೆಯಾಗುವುದಿಲ್ಲ

ಡಾಟಾ ಸೆಂಟರ್‌ಗಳೂ ಮರದಿಂದ ನಿರ್ಮಾಣ?
ಬಾಹ್ಯಾಕಾಶದಲ್ಲಿ ವಿಕಿರಣಗಳು ಉಪಗ್ರಹ ಒಳಗಿರುವ ಸೆಮಿಕಂಡಕ್ಟರ್‌ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಲಿಗ್ನೊಸ್ಯಾಟ್‌ ಅಧ್ಯಯನ ಮಾಡಲಿದೆ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಡಾಟಾ ಸೆಂಟರ್‌ಗಳನ್ನು ಮರದಿಂದ ನಿರ್ಮಾಣ ಮಾಡಬಹುದು ಎಂಬುದು ವಿಜ್ಞಾನಿಗಳ ಆಲೋಚನೆ.

ಐಎಫ್ಎಲ್ ಸೈನ್ಸ್ ವರದಿಯ ಪ್ರಕಾರ, ಕ್ಯೋಟೋ ವಿಶ್ವವಿದ್ಯಾಲಯದ ಅರಣ್ಯ ವಿಜ್ಞಾನ ಉಪನ್ಯಾಸಕರಾದ ಕೋಜಿ ಮುರಾಟಾ ಅವರು 1900ರ ಕಾಲಘಟ್ಟದಲ್ಲಿ ವಿಮಾನಗಳನ್ನೂ ಮರವನ್ನು ಬಳಸಿ ನಿರ್ಮಿಸುತ್ತಿದ್ದರಿಂದ, ಮರದಿಂದ ನಿರ್ಮಿಸುವ ಉಪಗ್ರಹಗಳೂ ಕಾರ್ಯಾಚರಿಸಬಲ್ಲವು ಎಂದು ಅಭಿಪ್ರಾಯಪಟ್ಟಿದ್ದಾರೆ. ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದಿರುವುದರಿಂದ, ಅಲ್ಲಿ ಮರ ಹೆಚ್ಚು ಬಾಳಿಕೆ ಬರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಇಂತಹ ಸನ್ನಿವೇಶ ಮರವನ್ನು ಕೊಳೆಯುವುದರಿಂದ ಮತ್ತು ನಶಿಸಿಹೋಗುವುದರಿಂದ ರಕ್ಷಿಸಿ, ಬಾಹ್ಯಾಕಾಶದ ವಾತಾವರಣದಲ್ಲಿ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ.

Wooden Satellite Japan 1

ಹಿಂದಿನ ಪರೀಕ್ಷೆಗಳ ಸಂದರ್ಭದಲ್ಲಿ, ಮರದ ತುಂಡುಗಳನ್ನು ಐಎಸ್ಎಸ್‌ನಲ್ಲಿ ಹತ್ತು ತಿಂಗಳುಗಳ ಕಾಲ ಬಾಹ್ಯಾಕಾಶ ಸನ್ನಿವೇಶಕ್ಕೆ ತೆರೆದಿಡಲಾಯಿತು. ಈ ಪರೀಕ್ಷೆಗಳ ಫಲಿತಾಂಶಗಳು ಆಶಾದಾಯಕವಾಗಿವೆ. ಈ ಮರದ ವಸ್ತುಗಳು ಅತ್ಯಂತ ಕಡಿಮೆ ಹಾನಿಗೊಳಗಾಗಿದ್ದು, ಬಾಹ್ಯಾಕಾಶದಲ್ಲಿ ಮರ ದೀರ್ಘಕಾಲ ಉಳಿಯಬಹುದು ಎಂಬ ನಂಬಿಕೆ ಮೂಡಲು ಕಾರಣವಾಗಿದೆ. ಮರದ ಉಪಗ್ರಹಗಳನ್ನು ಬಳಸುವುದರಿಂದ ಲಭಿಸುವ ಅತಿದೊಡ್ಡ ಪ್ರಯೋಜನವೆಂದರೆ, ಅವುಗಳ ಕಾರ್ಯಾಚರಣಾ ಅವಧಿ ಮುಕ್ತಾಯಗೊಂಡ ಬಳಿಕ, ಅವುಗಳ ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸುತ್ತಿದ್ದಂತೆ ಯಾವುದೇ ತ್ಯಾಜ್ಯವೂ ಉಳಿಯದಂತೆ ಸಂಪೂರ್ಣವಾಗಿ ದಹಿಸಿ ಹೋಗುತ್ತವೆ.

ಲಿಗ್ನೋಸ್ಯಾಟ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದರೆ ತಂಡವು ಮರದ ಉಪಗ್ರಹಗಳನ್ನು ಸ್ಪೇಸ್ ಎಕ್ಸ್‌ಗೂ ಪ್ರಯೋಜನವಾಗುವ ಅಥವಾ ಪರಿಚಯಿಸುವ‌  ಸಾಧ್ಯತೆಯಿದೆ. ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ ಎಕ್ಸ್ ಸ್ಟಾರ್ ಲಿಂಕ್ ಯೋಜನೆಗೆ ಇದು ನೆರವಾಗಬಹುದು. ಉಪಗ್ರಹವು ಪರಿಸರ ಸ್ನೇಹಿ ವಸ್ತುಗಳೊಂದಿಗೆ ಬಾಹ್ಯಾಕಾಶ ಪರಿಶೋಧನೆಯಲ್ಲಿ ಕ್ರಾಂತಿಯನ್ನು ಉಂಟುಮಾಡಬಹುದು. ಸುಮಿಟೊಮೊ ಫಾರೆಸ್ಟ್ರಿಯ ಕೆಂಜಿ ಕರಿಯಾ ಅವರ ಪ್ರಕಾರ, ಮರದ ಉದ್ಯಮವು ಇತ್ತೀಚಿನ ಆವಿಷ್ಕಾರದಿಂದ ಪ್ರಯೋಜನ ಪಡೆಯುತ್ತದೆ.

ಲಿಗ್ನೋಸ್ಯಾಟ್ ಉಪಗ್ರಹದ ವಸ್ತು ಮತ್ತು ಅಳತೆ:
ಲಿಗ್ನೋಸ್ಯಾಟ್ 4 ಇಂಚಿನ ಘನ-ಗಾತ್ರದ ಉಪಗ್ರಹವಾಗಿದ್ದು, ಸುಮಾರು 2 ಪೌಂಡ್‌ಗಳಷ್ಟು ತೂಗುತ್ತದೆ.

TAGGED:ISSjapanLignosatWooden Satellite
Share This Article
Facebook Whatsapp Whatsapp Telegram

Cinema Updates

Appu Cup League
ಅಪ್ಪು ಕಪ್ ಸೀಸನ್ 3; ಜರ್ಸಿ ಅನಾವರಣ
Bengaluru City Cinema Karnataka Latest Top Stories
The Task Movie
ಭೀಮ ಖ್ಯಾತಿಯ ಜಯ ಸೂರ್ಯ ನಟನೆಯ `ದಿ ಟಾಸ್ಕ್’ ಚಿತ್ರೀಕರಣ ಮುಕ್ತಾಯ
Cinema Latest Sandalwood Top Stories
Big twist in Ramachari Kannada Serial 2
‘ರಾಮಾಚಾರಿ’ಯಲ್ಲಿ ಬಿಗ್ ಟ್ವಿಸ್ಟ್ : ವಿಲನ್ ಗ್ಯಾಂಗ್ ಹಾಕೇ ಬಿಡ್ತು ಚೂರಿ !
Cinema Latest TV Shows
DARSHAN 1 1
ದರ್ಶನ್‌ ಜಾಮೀನು ಭವಿಷ್ಯ; ವಾದ-ಪ್ರತಿವಾದ ಮುಕ್ತಾಯ – ಒಂದು ವಾರದಲ್ಲಿ ಸುಪ್ರೀಂ ಆದೇಶ
Bengaluru City Cinema Court Districts Karnataka Latest Main Post National Sandalwood
K.J. George
ಇಡೀ ದೇಶದ ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ: ಕೆ.ಜೆ.ಜಾರ್ಜ್
Bengaluru City Cinema Districts Karnataka Latest Sandalwood Top Stories

You Might Also Like

Nelamangala Child Killed by Mother
Bengaluru City

ಕುಡಿತಕ್ಕೆ ದಾಸನಾಗಿದ್ದ ಪತಿಯೊಂದಿಗೆ ಗಲಾಟೆ – ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

Public TV
By Public TV
33 minutes ago
Chinnaswamy Stadium Stampede Case Daughters earring stolen divyanshi mother Ashwini Complaint filed against Bowring Hospital
Bengaluru City

ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

Public TV
By Public TV
1 hour ago
Chinnaswamy Stampede 1
Bengaluru City

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ | RCB ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಕ್ಯಾಬಿನೆಟ್‌ ಒಪ್ಪಿಗೆ

Public TV
By Public TV
1 hour ago
Konareddy
Bengaluru City

ಮಹದಾಯಿಗೆ ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಇವರ‍್ಯಾರು: ಗೋವಾ ಸಿಎಂ ವಿರುದ್ಧ ಕೋನರೆಡ್ಡಿ ಗರಂ

Public TV
By Public TV
1 hour ago
HK Patil
Bengaluru City

ಜನತೆಗೆ ಮತ್ತೊಂದು ಶಾಕ್‌; ರಾಜ್ಯದ ಎಲ್ಲಾ ಬಹುಮಹಡಿ, ಎತ್ತರದ ಕಟ್ಟಡಗಳಿಗೆ 1% ಸೆಸ್ ವಿಧಿಸಲು ಕ್ಯಾಬಿನೆಟ್ ಅಸ್ತು

Public TV
By Public TV
2 hours ago
KJ George 1
Bengaluru City

ಸ್ಮಾರ್ಟ್ ಮೀಟರ್ ಹಗರಣ ಆರೋಪ – ಕೋರ್ಟ್ ತೀರ್ಪಿಗೆ ನಾನು ಬದ್ಧ: ಸಚಿವ ಜಾರ್ಜ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?