Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರೋಹಿತ್ ಶತಕ ಸಾಧನೆ – ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ರೋಹಿತ್ ಶತಕ ಸಾಧನೆ – ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿ

Cricket

ರೋಹಿತ್ ಶತಕ ಸಾಧನೆ – ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿ

Public TV
Last updated: June 5, 2019 11:14 pm
Public TV
Share
3 Min Read
ROHIT SHARMA
SHARE

ಸೌತಾಂಪ್ಟನ್: 2019 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದ್ದು, ಕೊಹ್ಲಿ ನಾಯಕತ್ವದ ತಂಡ ದಕ್ಷಿಣಾ ಆಫ್ರಿಕಾ ವಿರುದ್ಧ 15 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಗೆಲುವು ಪಡೆದಿದೆ.

ಗೆಲ್ಲಲು 228 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರ ಅಜೇಯ ಶತಕ 122 ರನ್(144 ಎಸೆತ 13 ಬೌಂಡರಿ, 2 ಸಿಕ್ಸರ್) ನೆರವಿನಿಂದ 47.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿ ಗುರಿ ಮುಟ್ಟಿತು. ಭಾರತದ ಪರ ಧೋನಿ 34 ರನ್ (46ಎಸೆತ, 2 ಬೌಂಡರಿ), ರಾಹುಲ್ 26 ರನ್, ಕೊಹ್ಲಿ 18 ರನ್, ಪಾಂಡ್ಯ ಔಟಾಗದೆ 15 ರನ್ ಗಳಿಸಿ ಅಜೇಯರಾಗಿ ಉಳಿದರು.

A fantastic performance from #TeamIndia and in particular from these two!

They win their opening game by six wickets.
All scores and stats here ➡️ https://t.co/yx6Mkqsy3J#SAvIND #CWC19 #TeamIndia pic.twitter.com/1wTjcvQLya

— ICC Cricket World Cup (@cricketworldcup) June 5, 2019

ರೋಹಿತ್ ಶರ್ಮಾ, ಶಿಖರ್ ಧವನ್ ಎಚ್ಚರಿಕೆ ಆಟದ ಮೂಲಕ ಉತ್ತಮ ಆರಂಭ ನೀಡುವ ಪ್ರಯತ್ನ ನಡೆಸಿದರು. ಆದರೆ ವಿಕೆಟ್ 8 ರನ್ ಗಳಿಸಿದ್ದ ಧವನ್ ವಿಕೆಟ್ ಪಡೆದ ರಬಾಡಾ ಟೀಂ ಇಂಡಿಯಾಗೆ ಮೊದಲ ಆಘಾತ ನೀಡಿದರು. ಇತ್ತ ರೋಹಿತ್ ಶರ್ಮಾ 2 ಜೀವದಾನಗಳನ್ನು ಪಡೆದು ಬ್ಯಾಟಿಂಗ್ ಮುಂದುವರಿಸಿದರು. ಧವನ್ ಔಟಾಗುತ್ತಿದಂತೆ ಕಣಕ್ಕೆ ಇಳಿದ ಕೊಹ್ಲಿ ಕೂಡ ನಿಧಾನಗತಿ ಬ್ಯಾಟಿಂಗ್‍ಗೆ ನಡೆಸಿ ಕೆಟ್ಟ ಹೊಡೆತಗಳಷ್ಟೇ ದಂಡಿಸುವ ಪ್ರಯತ್ನ ನಡೆಸಿದರು. ಈ ಹಂತದಲ್ಲಿ ಡ್ವೇನ್ ಪೆಟೊರ್ಟರಿಯಸ್ ಕೊಹ್ಲಿ ವಿಕೆಟ್ ಪಡೆದರು. ಈ ವೇಳೆಗೆ ಟೀಂ ಇಂಡಿಯಾ 15.3 ಓವರ್ ಗಳಲ್ಲಿ 54 ರನ್ ಗಳಷ್ಟೇ ಗಳಿಸಿತ್ತು.

ರೋಹಿತ್ ಶತಕ: ಪಂದ್ಯದಲ್ಲಿ ಸಿಕ್ಕ ಜೀವದಾನಗಳನ್ನು ಉಪಯೋಗಿಸಿ ಕೊಂಡು ಎಚ್ಚರಿಕೆಯ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ 70 ಎಸೆತಗಳಲ್ಲಿ ತಮ್ಮ ಅರ್ಧ ಶತಕ ಪೂರ್ಣಗೊಳಿಸಿದರು. ಇತ್ತ ರೋಹಿತ್ ರನ್ನು ಕೂಡಿಕೊಂಡ ಕೆಎಲ್ ರಾಹುಲ್ 3ನೇ ವಿಕೆಟ್‍ಗೆ 85 ರನ್ ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಹುಲ್ 26 ರನ್ ಗಳಿಸಿ ರಬಾಡಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

D8T Z7UVsAAX8y

ಟೀಂ ಇಂಡಿಯಾ ಗೆಲುವಿಗೆ 108 ಎಸೆತಗಳಲ್ಲಿ 89 ರನ್ ಗಳು ಅಗತ್ಯವಿರುವ ವೇಳೆ ಮಾಜಿ ನಾಯಕ ಧೋನಿ ಬ್ಯಾಟಿಂಗ್ ಇಳಿದರು. ವಿಕೆಟ್ ಕಾಯ್ದುಕೊಳ್ಳುತ್ತಲೇ ರನ್ ಪಡೆಯುತ್ತಿದ್ದ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಸಂಭ್ರಮಿಸಿದರು. 128 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ರೋಹಿತ್ ಶತಕ ಸಾಧನೆ ಮಾಡಿ ತಂಡವನ್ನು ಜಯದತ್ತ ಮುನ್ನಡೆಸಿದರು. ಆ ಮೂಲಕ ವೃತ್ತಿ ಜೀವನದ 23ನೇ ಶತಕವನ್ನು ಪೂರೈಸಿದರು. ಇದು ರೋಹಿತ್ ಶರ್ಮಾರ 2ನೇ ವಿಶ್ವಕಪ್ ಶತಕವಾಗಿದೆ. 22 ಶತಕ ಗಳಿಸಿದ್ದ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿರನ್ನು ರೋಹಿತ್ ಹಿಂದಿಕ್ಕಿದರು.

ಇತ್ತ ರೋಹಿತ್ ಜೊತೆಯಾಗಿ ಟೀಂ ಇಂಡಿಯಾವನ್ನು ಗೆಲುವಿನ ಸನಿಹ ತಂಡ ಮಾಜಿ ನಾಯಕ ಧೋನಿ 34 ರನ್ ಗಳಿಸಿ ನಿರ್ಮಿಸಿದರು. ಈ ಜೋಡಿ 4 ವಿಕೆಟ್‍ಗೆ 88 ಎಸೆತಗಳಲ್ಲಿ 74 ರನ್ ಜೊತೆಯಾಟ ನೀಡಿತು. 23 ಎಸೆತಗಳಲ್ಲಿ 15 ರನ್ ಅಗತ್ಯವಿದ್ದ ವೇಳೆ ಕ್ರಿಸ್ ಗಿಳಿಸಿದ ಹಾರ್ದಿಕ್ ಪಾಂಡ್ಯ 3 ಬೌಂಡರಿ ಸಹಿತ 15 ರನ್ ಗಳಿಸಿದರು.

DHONI

ಇತ್ತ ರೋಹಿತ್ ಶರ್ಮಾ ಶತಕದೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ 26 ಶತಕಗಳನ್ನು ಸಿಡಿಸಿದ್ದ ಆಸ್ಟ್ರೇಲಿಯಾ ಆಟಗಾರರ ದಾಖಲೆಯನ್ನು ಸರಿಗಟ್ಟಿತು. ಅಲ್ಲದೇ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿ 50ನೇ ಗೆಲುವು ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ಸಿಲುಕಿ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಪರ ನಾಯಕ ಡುಪ್ಲೆಸಿಸ್ 39 ರನ್, ಮಿಲ್ಲರ್ 31 ರನ್ ಹಾಗೂ ಅಂತಿಮ ಹಂತದಲ್ಲಿ (34 ಎಸೆತ, 1 ಬೌಂಡರಿ, 2 ಸಿಕ್ಸರ್), ರಬಾಡ ಔಟಾಗದೇ 31 ರನ್(35 ಎಸೆತ, 2 ಬೌಂಡರಿ) ಗಳಿಸಿ ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು. ಭಾರತದ ಪರ ಚಹಲ್ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಬುಮ್ರಾ ತಲಾ 2 ವಿಕೆಟ್, ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.

D8TMbpQX4AUlXYT

TAGGED:dhonikohliPublic TVRohit Sharmasouth africaTeam indiaworld cupಕೊಹ್ಲಿಟೀಂ ಇಂಡಿಯಾದಕ್ಷಿಣಾ ಆಫ್ರಿಕಾಧೋನಿಪಬ್ಲಿಕ್ ಟಿವಿರೋಹಿತ್ ಶರ್ಮಾವಿಶ್ವಕಪ್
Share This Article
Facebook Whatsapp Whatsapp Telegram

Cinema news

Jai Lalitha Serial
ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಜೈ ಲಲಿತಾ
Cinema Latest Top Stories TV Shows
Arjun Janya
ಅರ್ಜುನ್ ಜನ್ಯ ಸಂಯೋಜನೆಯಲ್ಲಿ ʻಮಹಾಗುರು ಮಹಾದೇವʼ ಆಲ್ಬಂ
Cinema Latest Sandalwood
Sanvi Sudeep
ಅರಿಶಿಣ ಶಾಸ್ತ್ರದಲ್ಲಿ ಸುದೀಪ್ ಪುತ್ರಿ – ಫೋಟೋ ವೈರಲ್
Cinema Latest Sandalwood Top Stories
Ratha Saptami Jeevan Moulya
ರಥಸಪ್ತಮಿ: ವಿಭಿನ್ನ ಧಾರಾವಾಹಿಗೆ ಸಾಕ್ಷಿಯಾದ ಉದಯ ಟಿವಿ
Cinema Latest TV Shows

You Might Also Like

chalavadi narayanaswamy 1
Bengaluru City

ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್: ಛಲವಾದಿ ನಾರಾಯಣಸ್ವಾಮಿ

Public TV
By Public TV
6 minutes ago
BY Vijayendra MP Renukacharya
Bengaluru City

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯೋದು ಸೂರ್ಯ-ಚಂದ್ರ ಇರುವಷ್ಟೇ ಸತ್ಯ: ರೇಣುಕಾಚಾರ್ಯ

Public TV
By Public TV
7 minutes ago
MP RENUKACHARYA
Bengaluru City

ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ, ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟ ಬಿಟ್ಟು ರೈತರ ಸಮಸ್ಯೆ ಆಲಿಸಲಿ: ರೇಣುಕಾಚಾರ್ಯ

Public TV
By Public TV
39 minutes ago
Mandya
Districts

ಶ್ರೀರಂಗಪಟ್ಟಣ | ಜಾಮಿಯಾ ಮಸೀದಿ ಹಿಂದೂಗಳದ್ದು, ಹನುಮ ಮಂದಿರ ಮತ್ತೆ ಕಟ್ಟುವೆವು – ಮಾಲಾಧಾರಿಗಳ ಬಿಗಿಪಟ್ಟು

Public TV
By Public TV
54 minutes ago
eshwara khandre forest staff
Chamarajanagar

ಶಿವನಸಮುದ್ರ ನಾಲೆಯಿಂದ ಆನೆ ರಕ್ಷಿಸಿದ ಸಿಬ್ಬಂದಿ ಸನ್ಮಾನಿಸಿದ ಸಚಿವ ಈಶ್ವರ ಖಂಡ್ರೆ

Public TV
By Public TV
56 minutes ago
Sanchar Saathi
Latest

‘ಸಂಚಾರ್ ಸಾಥಿ’ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?