ಪತಿಗಾಗಿ ಮೊದಲ ಪತ್ನಿಯಿಂದ ಎರಡನೇ ಪತ್ನಿಯ ಮನೆ ಮುಂದೆ ಧರಣಿ

Public TV
1 Min Read
KOPPALA 2 MAREGE

ಕೊಪ್ಪಳ: ಇಬ್ಬರು ಹೆಂಡತಿಯರಿಗೆ ಮುದ್ದಿನ ಗಂಡನಾಗಬೇಕು ಎಂಬ ಕನಸನ್ನು ಹೊಂದಿದ್ದ. ಆದರೆ ಈಗ ಮೊದಲ ಪತ್ನಿ, ಪತಿಯ ವಿರುದ್ಧವೇ ತಿರುಗಿಬಿದ್ದು ನ್ಯಾಯಕ್ಕಾಗಿ ಧರಣಿ ನಡೆಸಿದ್ದಾರೆ.

ಎರಡನೇ ಮದುವೆಯಾಗಿರುವ ಮಂಜುನಾಥ್ ಮೂಲತಃ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ನಿವಾಸಿಯಾಗಿದ್ದು, ಕೊಪ್ಪಳದ ತನ್ನ ಸ್ವಂತ ಅಕ್ಕನ ಮನೆಯಲ್ಲೇ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿ, ತಾನೇ ಸ್ವತಃ ಇಷ್ಟ ಪಟ್ಟು ತನ್ನ ಅಕ್ಕನ ಮಗಳು ವಿಜಯಶ್ರೀಯನ್ನು 2013ರಲ್ಲಿ ಮದುವೆಯಾಗಿದ್ದ

ಮೊದಲಿನಿಂದಲೂ ಪರಿಚಯವಿದ್ದ ತನ್ನ ಪತ್ನಿಯ ಎದುರು ಮನೆಯ ಶಿಲ್ಪಾಳೊಂದಿಗೆ ಲವ್ವಿ-ಡವ್ವಿ ಅಂತಾ ತಿರುಗಾಡಿ, ಮೊದಲ ಪತ್ನಿ ಮತ್ತು ಕುಟುಂಬಕ್ಕೆ ಸಣ್ಣ ಸುಳಿವೂ ನೀಡದಂತೆ ಅಕ್ಟೋಬರ್ 2016 ರಂದು ರಿಜಿಸ್ಟರ್ ಮದುವೆಯಾಗಿದ್ದಾನೆ.

ಮಂಜುನಾಥ್ ಕಳೆದ ನಾಲ್ಕು ದಿನದ ಹಿಂದೆ ಶಿಲ್ಪಾರನ್ನು ಮನೆಗೆ ಕರೆದೊಯ್ದು, 2016 ರಲ್ಲಿ ಶಿಲ್ಪಾರ ಕೊರಳಿಗೂ ತಾಳಿಕಟ್ಟಿದೇನೆ. ಇಬ್ಬರೂ ಒಂದೇ ಮನೆಯಲ್ಲಿ ಇರುವಂತೆ ಹೇಳಿದ್ದಾನೆ. ಇದರಿಂದ ಮೊದಲ ಪತ್ನಿ ಆಕ್ಷೇಪ ವ್ಯಕ್ತ ಪಡಿಸಿದ್ದಕ್ಕೆ ಹಲ್ಲೆಮಾಡಿ ಮನೆಯಿಂದ ಹೊರಹಾಕಿದ್ದಾನೆ.

ನೊಂದ ವಿಜಯಶ್ರೀ ಎರಡನೇ ಮದುವೆಯನ್ನು ಖಂಡಿಸಿ ತನ್ನ ತಾಯಿ ಗೀತಾರೊಂದಿಗೆ, ತನ್ನ ಪತಿ ಮಂಜುನಾಥನ ಫೋಟೋ ಹಿಡಿದು ಶಿಲ್ಪಾ ಮನೆ ಮುಂದೆ ಕಣ್ಣೀರು ಹಾಕುತ್ತಾ ಧರಣಿ ಕುಳಿತಿದ್ದಾರೆ. ಇದರಿಂದ ಕೆರಳಿದ ಶಿಲ್ಪಾ ಮತ್ತು ಅವರ ಕುಟುಂಬ, ವಿಜಯಶ್ರೀ ಹಾಗೂ ಅವರ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ.

ವಿಜಯಶ್ರೀ ತನ್ನ ಗಂಡ ಎರಡನೇ ಮದುವೆಯಾಗಿ ನನಗೆ ಮೋಸಮಾಡಿದ್ದಾನೆ. ಆಕ್ಷೇಪಿಸಿದ್ದಕ್ಕೆ ನನ್ನ ಮೇಲೆ ದೌರ್ಜನ್ಯವೆಸಗಿ ಮನೆಯಿಂದ ಹೊರಹಾಕಿದ್ದಾನೆ. ನಂತರ ಶಿಲ್ಪಾ ಮನೆಗೆ ಹೋಗಿ ನ್ಯಾಯಕೇಳಿದಕ್ಕೆ, ಅವರ ಕುಟುಂಬವು ನನ್ನ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *