ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

Public TV
1 Min Read
YDR CEO.jpg

ಯಾದಗಿರಿ: ಸರ್ಕಾರದಿಂದ ಸಿಗಬೇಕಾದ ಕೂಲಿ ಹಣ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸಿದ ಕಾರ್ಮಿಕ ಮಹಿಳೆಯೊಬ್ಬರು ಜಿ.ಪಂ ಸಿಇಓ ಅವರನ್ನು ಪ್ರಶ್ನೆ ಮಾಡಿದ್ದರು. ಈ ವೇಳೆ ನನಗೆ ಕಳೆದ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದು ಯಾದಗಿರಿ ಜಿ.ಪಂ ಸಿಇಓ ಕವಿತಾ ಮನ್ನಿಕೇರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಎರಡು ತಿಂಗಳ ಕೂಲಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ತಮ್ಮ ಕೂಲಿ ಹಣ ನೀಡುವಂತೆ ಇಂದು ಕಾರ್ಮಿಕ ಮಹಿಳೆಯರು ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರು ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡದರು. ಆದರೆ ಈ ವೇಳೆ ಮಹಿಳೆಯೊಬ್ಬರು ತಮ್ಮ ಕೂಲಿ ಹಣ ಕೂಡಲೇ ಪಾವತಿ ಮಾಡುವಂತೆ ಅಗ್ರಹಿಸಿದ್ದರು. ಕಾರ್ಮಿಕರ ಬೇಡಿಕೆ ಕೇಳಿದ ಸಿಇಒ ಕವಿತಾ ಅವರು ತಮಗೇ ಕಳೆದ 6 ತಿಂಗಳಿಂದ ಸಂಬಳ ಆಗಿಲ್ಲ ಎಂದು ತಿಳಿಸಿದರು.

vlcsnap 2019 02 06 20h35m19s171

ಇತ್ತ ಜಿಲ್ಲಾ ಪಂಚಾಯಿತಿ ಸಿಇಓ ಅವರು ಹೇಳಿದ ಮಾತಿಗೆ ಕೆಲ ಪ್ರತಿಭಟನೆ ನಿಂತ ಮಹಿಳೆಯರು ಕ್ಷಣ ಕಾಲ ಕಂಗಾಲಾದರು. ಪ್ರತಿಭಟನೆ ನಿರತ ಮಹಿಳೆಯ ಮುಂದೇ ನಗುತ್ತಲೇ ನೋವು ಹೊರಹಾಕಿದ ಸಿಇಓ ಕವಿತಾ ಮನ್ನಿಕೇರಿ ಅವರು, ನಿಮ್ಮ ಸಮಸ್ಯೆಗಳು ನನಗೆ ಗೊತ್ತಿದೆ. ನಾನು ಒಬ್ಬ ಹೆಣ್ಣು ಮಗಳು, ನಿಮ್ಮ ಬೇಡಿಕೆಗಳನ್ನು ನಾನು ಸರ್ಕಾರದ ಗಮನ ತರುತ್ತೇನೆ. ಈಗ ಬೆಂಗಳೂರಿನಲ್ಲಿ ಸದನ ನಡೆಯುತ್ತಿದ್ದು, ಆದಷ್ಟು ಶೀಘ್ರ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ ಎಂದು ಕಾರ್ಮಿಕ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದರು.

ತೀವ್ರ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ಜನ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗುತ್ತಿದ್ದು, ಬಹುತೇಕ ಹಳ್ಳಿಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಸರ್ಕಾರ ಯೋಜನೆಗಳು ಸರಿಯಾದ ಸಮಯಕ್ಕೆ ಅನುಷ್ಠಾನ ಆಗದ ಹಿನ್ನೆಲೆಯಲ್ಲಿ ಬಡ ಜನರ ಹೊತ್ತೊಟ್ಟಿನ ಊಟಕ್ಕಾಗಿ ಪದರಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಪ್ರತಿಭಟನಾಕಾರರು ತಮ್ಮ ನೋವನ್ನು ತೋಡಿಕೊಂಡರು.

YDR CEO

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *