ಮಾನಸಿಕ ಖಿನ್ನತೆಗೊಳಗಾಗಿರೋ ಮಗಳನ್ನು 12 ವರ್ಷದಿಂದ ಸರಪಳಿಯಿಂದ ಬಂಧಿಸಿದ ಮಹಿಳೆ!

Public TV
1 Min Read
CTD HOME ARREST COLLAGE

ಚಿತ್ರದುರ್ಗ: ಮಾನಸಿಕವಾಗಿ ಖಿನ್ನತೆಗೊಳಗಾಗಿರೋ ಮಹಿಳೆಗೆ ಚಿಕಿತ್ಸೆ ಕೊಡಿಸಲಾಗದೇ ಸರಪಳಿಯಿಂದ ಬಂಧಿಸಿರೋ ಅಮಾನವೀಯ ಕೃತ್ಯ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಅಪ್ರಾಪ್ತ ವಯಸ್ಸಿಗೆ ಸರಸ್ವತಿಯ ವಿವಾಹವಾಗಿದ್ದು, ಕೌಟಂಬಿಕ ಕಲಹದಿಂದ ಈಕೆಯ ಪತಿ ಬೊಮ್ಮಣ್ಣ ದೂರವಾಗಿ ಮತ್ತೊಂದು ವಿವಾಹವಾಗಿದ್ದನು. ಹೀಗಾಗಿ ಅಂದಿನಿಂದ ಮಾನಸಿಕ ಖಿನ್ನತೆಗೊಳಗಾಗಿ ಗ್ರಾಮದ ಜನರೊಂದಿಗೆ ಜಗಳಕ್ಕಿಯುವ ವಿಚಿತ್ರ ಮನೋಸ್ಥಿತಿಯನ್ನು ರೂಢಿಸಿಕೊಂಡಿದ್ದ.

21 ವರ್ಷದ ಸರಸ್ವತಿಗೆ ಆಕೆಯ ತಾಯಿ ಚಿಕಿತ್ಸೆ ಕೊಡಿಸಲಾಗದೇ, ಮನನೊಂದು ಕಳೆದ 12 ವರ್ಷಗಳಿಂದ ಈಕೆಯ ಕಾಲಿಗೆ ಸರಪಳಿ ಮೂಲಕ ಮರದ ತುಂಡೊಂದನ್ನು ಬಿಗಿದು ಎಲ್ಲೂ ಓಡಾಡದಂತೆ ಶಿಕ್ಷೆ ವಿಧಿಸಿದ್ದಾರೆ. ಆದ್ರೆ ಈವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇವರ ಸಂಕಷ್ಟ ಅರಿತು ಚಿಕಿತ್ಸೆಗೆ ಸಹಕರಿಸದಿರೋದು ದುರದೃಷ್ಟಕರ.

Share This Article
Leave a Comment

Leave a Reply

Your email address will not be published. Required fields are marked *