ರಾಮನಗರ: ಜೆಡಿಎಸ್ (JDS) ಕಾರ್ಯಕರ್ತ ಎಂಬ ಕಾರಣಕ್ಕೆ ಜಮೀನಿಗೆ ದಾರಿ ಬಿಡದೆ ಕಾಂಗ್ರೆಸ್ (Congress) ಮುಖಂಡರು ಕಿರುಕುಳ ನೋಡ್ತಿದ್ದಾರೆ ಎಂದು ರೈತ ಕುಟುಂಬವೊಂದು (Farmer Family) ಆರೋಪಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar) ಸ್ವಗ್ರಾಮ ಕನಕಪುರ ತಾಲೂಕಿನ ದೊಡ್ಡ ಆಲನಹಳ್ಳಿಯ ನೇತ್ರಾವತಿ ಎಂಬ ರೈತ ಮಹಿಳೆ ಕಾಂಗ್ರೆಸ್ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನೇತ್ರಾವತಿಯವರ ಮಾವ ಜೆಡಿಎಸ್ ಕಾರ್ಯಕರ್ತ ಎಂಬ ಕಾರಣಕ್ಕೆ ಅವರ ಜಮೀನಿಗೆ ದಾರಿ ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಬಿಜೆಪಿ ನಮ್ಮ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ: ಡಿಕೆಶಿ
ಗ್ರಾಮದ ಸರ್ವೆ ನಂ.42/2ರಲ್ಲಿ 3 ಎಕರೆ ಜಮೀನು ಹೊಂದಿರೋ ನೇತ್ರಾವತಿ ಕಳೆದ 15 ವರ್ಷಗಳಿಂದ ಜಮೀನು ಪಾಳು ಬಿಟ್ಟಿದ್ದಾರೆ. ಯಾಕೆಂದರೆ ಗ್ರಾಮದ ಕಾಂಗ್ರೆಸ್ ಮುಖಂಡರಾದ ಲೋಕೇಶ್, ಶಿವಪ್ಪ, ವಡಕೇಗೌಡ ಎಂಬುವವರು ನಮ್ಮ ಜಮೀನಿಗೆ ದಾರಿ ಬಿಡುತ್ತಿಲ್ಲ. ನಮ್ಮ ಮಾವ ಜೆಡಿಎಸ್ ಕಾರ್ಯಕರ್ತ ಎಂಬ ಕಾರಣಕ್ಕೆ ಜಿದ್ದು ಸಾಧಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನ ಇಲ್ಲ. ಕೋರ್ಟ್ ಮೂಲಕ ಹೋದ್ರೂ ನ್ಯಾಯ ಸಿಕ್ತಿಲ್ಲ ಎಂದು ನೇತ್ರಾವತಿ ಹಾಗೂ ಪುತ್ರ ಧರಣೀಶ್ ಸುದ್ದಿಗೋಷ್ಠಿ ನಡೆಸಿ ಜಮೀನಿಗೆ ದಾರಿ ಬಿಡಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾರಿನ ಬಾನೆಟ್ ಮೇಲೆ ಹೋದವನೇ ಅರೆಸ್ಟ್- ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k