ಜೈಪುರ: ಸ್ನೇಹಿತನೊಂದಿಗೆ ಪತ್ನಿಯನ್ನು ನೋಡಿದ್ದ ಪತಿ ಹಾಗೂ ಇತರ ಸಂಬಂಧಿಕರು ಸೇರಿ ಆಕೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ನಡೆದಿದೆ.
ಬನ್ಸ್ವಾರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಸ್ನೇಹಿತನೊಂದಿಗೆ ಇದ್ದಳು. ಈ ಸಂದರ್ಭದಲ್ಲಿ ಆಕೆಯ ಪತಿ ನೋಡಿದ್ದಾನೆ. ಇದರಿಂದಾಗಿ ಕೋಪಗೊಂಡ ಆತ ಹಾಗೂ ಆತನ ಸಂಬಂಧಿಕರು ಆಕೆಯನ್ನು 7 ಗಂಟೆಗಳ ಕಾಲ ಒಂದು ಮರಕ್ಕೆ ಕಟ್ಟಿ ಕೋಲಿನಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ಜೊತೆಗಿದ್ದವನಿಗೂ ಇದೇ ರೀತಿ ಥಳಿಸಿದ್ದಾರೆ.
ಈ ವೀಡಿಯೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದರಲ್ಲಿ ಆಕೆ ಕಿರುಚಾಡುತ್ತಿರುವುದನ್ನು ಗಮನಿಸಬಹುದಾಗಿದೆ. ಈ ಸಂಬಂಧ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಘಟನೆ ಕುರಿತು ಆಕೆಯ ಪತಿ, ಸೋದರ ಮಾವ ಇಬ್ಬರು ಅಪ್ರಾಪ್ತರು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.
राजस्थान के गृह मंत्रालय ने गुंडे – बदमाशों को खुली छूट दी है जैसे जंगल में भूखे भेड़िए घूमते हैं। जरूरी है इस वीडियो की जांच और दोषियों के खिलाफ कड़ा संदेश देते हुए कार्रवाई…
लेकिन भेड़ियों की संरक्षक इस सरकार से उम्मीद बेमानी है। आवाज हमें ही उठानी होगी!#Rajasthan pic.twitter.com/oRq0rJHHFa
— Gajendra Singh Shekhawat (@gssjodhpur) July 30, 2022
ಘಟನೆ ಸಂಬಂಧ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ರಾಜಸ್ಥಾನದ ಗೃಹ ಇಲಾಖೆಯು ಗೂಂಡಾಗಳನ್ನು ಮುಕ್ತಗೊಳಿಸಿದೆ, ಅವರು ಹಸಿದ ತೋಳಗಳಂತೆ ಕಾಡುಗಳಲ್ಲಿ ಅಲೆದಾಡುತ್ತಿದ್ದಾರೆ. ಈ ವೀಡಿಯೋವನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.