ಚಂಡೀಗಡ: ಪ್ರತಿದಿನ ಪತಿ ಮೊಟ್ಟೆ ತಂದುಕೊಡಲಿಲ್ಲ ಎಂದು ಹೇಳಿ ಪತ್ನಿ ಪ್ರಿಯಕರನ ಜೊತೆ ಓಡಿ ಹೋದ ಘಟನೆ ಹರಿಯಾಣದ ಗೋರಖ್ಪುರ್ ನಲ್ಲಿ ನಡೆದಿದೆ.
ಗೋರಖ್ಪುರದ ಕ್ಯಾಂಪಿಯರ್ ಗಂಜ್ ನಿವಾಸಿಯಾಗಿರುವ ಮಹಿಳೆ ಪತಿ ದಿನ ತಿನ್ನಲು ಮೊಟ್ಟೆ ತಂದು ಕೊಡುತ್ತಿರಲಿಲ್ಲ ಎಂದು ಪ್ರಿಯಕರನ ಜೊತೆ ಓಡಿ ಹೋದಳು. ನಾಲ್ಕು ತಿಂಗಳ ಹಿಂದೆ ಕೂಡ ಮಹಿಳೆ ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಳು. ಮನೆಗೆ ಹಿಂದಿರುಗಿ ಬಂದಾಗ ಪೊಲೀಸರ ಬಳಿ ಇದೇ ಕಾರಣವನ್ನು ನೀಡಿದ್ದಳು.
ಒಂದು ವರ್ಷಗಳಿಂದ ಮಹಿಳೆ ಮನೆಯ ಹತ್ತಿರದಲ್ಲೇ ವಾಸಿಸುವ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಪತ್ನಿ ಯುವಕನ ಜೊತೆ ಓಡಿ ಹೋದ ಬಳಿಕ ಆಕೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಹಿಳೆ ಮೊಟ್ಟೆಯನ್ನು ತುಂಬಾನೇ ಇಷ್ಟ ಪಡುತ್ತಿದ್ದಳು. ಒಂದು ಮೊಟ್ಟೆ ತಿಂದ ಬಳಿಕ ಮತ್ತೊಂದು ಮೊಟ್ಟೆ ಕೊಡಲಿಲ್ಲ ಎಂದು ಆಕೆ ಓಡಿ ಹೋಗಿದ್ದಳು. ಇತ್ತ ಆ ಯುವಕ ಕೂಡ ಮನೆಯಲ್ಲಿ ಇರದ ಕಾರಣ ಆತನ ಜೊತೆ ಓಡಿ ಹೋಗಿರಬಹುದು ಎಂದು ಪತಿ ಅನುಮಾನ ವ್ಯಕ್ತಪಡಿಸಿದ್ದನು.
ಮಹಿಳೆ ತನ್ನ ಜೊತೆ ಎಂಟನೇ ತರಗತಿಯಲ್ಲಿ ಓದುತ್ತಿದ್ದ ನಾದಿನಿಯನ್ನು ಕೂಡ ತನ್ನ ಜೊತೆ ಕರೆದುಕೊಂಡು ಹೋಗಿದ್ದಳು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು.
ಮೊಟ್ಟೆ ವಿಷಯಕ್ಕಾಗಿ ಪತಿ-ಪತ್ನಿ ನಡುವೆ ಯಾವಾಗಲೂ ಜಗಳ ನಡೆಯುತ್ತಿತು. ಈ ನಡುವೆ ಮಹಿಳೆಗೆ ಮೊಟ್ಟೆ ಇಷ್ಟ ಎಂಬ ವಿಷಯವನ್ನು ಪ್ರಿಯಕರ ತಿಳಿದಿದ್ದನು. ಹಾಗಾಗಿ ಆತ ಪ್ರತಿದಿನ ಆಕೆಗೆ ಮೊಟ್ಟೆ ತಂದು ಕೊಡುತ್ತಿದ್ದನು.