ಗುರುಗ್ರಾಮ: ಕೆಲಸದಿಂದ ತೆಗೆದಿದ್ದಕ್ಕೆ ಯುವತಿಯೊಬ್ಬಳು ಕಚೇರಿಯ ಟೆರೇಸ್ಗೆ ತಲುಪಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಮಾಡಿದ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಯುವತಿ ಗುರುಗ್ರಾಮ ಸೆಕ್ಟರ್ 18ನಲ್ಲಿರುವ ಪ್ರೈವೇಟ್ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. ಯಾವುದೋ ಕಾರಣಕ್ಕಾಗಿ ಯುವತಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಆಘಾತಗೊಂಡ ಯುವತಿ ಕಟ್ಟಡದ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ.
ಯುವತಿ ಟೆರೇಸ್ಗೆ ಹೋಗಿ ಕಟ್ಟಡದ ಅಂಚಿನಲ್ಲಿ ನಿಂತು ಇಲ್ಲಿಂದ ಹಾರುವುದಾಗಿ ಕಿರುಚುತ್ತಿದ್ದಳು. ಇದನ್ನು ಕೇಳಿದ ಆಕೆಯ ಸಹದ್ಯೋಗಿಗಳು ಹಾಗೂ ಕೌನ್ಸಲರ್ಗಳು ಯುವತಿಯನ್ನು ತಡೆಯಲು ಮುಂದಾದರು. ಆದರೆ ಯುವತಿ ಇವರ ಯಾರ ಮಾತನ್ನು ಒಪ್ಪಲಿಲ್ಲ.
ಯುವತಿಯ ವರ್ತನೆ ನೋಡಿದ ಆಕೆಯ ಸಹದ್ಯೋಗಿಗಳು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಯುವತಿ ಪೊಲೀಸರನ್ನು ನೋಡಿ ಕೋಪಗೊಂಡು ಜಿಗಿಯುವುದಾಗಿ ಬೆದರಿಕೆ ಹಾಕಿದ್ದಳು.
ಯುವತಿಯ ವರ್ತನೆಗೆ ಬೇಸೆತ್ತ ಕಂಪನಿಯ ಆಡಳಿತ ಮಂಡಳಿ ಕೆಲಸದಿಂದ ತೆಗೆಯುವುದಿಲ್ಲ ಎಂದು ಮಾತು ನೀಡಿದ್ದರು. ಆಗ ಯುವತಿ ಕಟ್ಟಡದಿಂದ ಕೆಳಗೆ ಇಳಿದಿದ್ದು, ಸಹದ್ಯೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.