ಹುಬ್ಬಳ್ಳಿ: ವರದಕ್ಷಿಣೆ ತರಲೊಪ್ಪದ ನವವಿವಾಹಿತೆಯನ್ನು ಪತಿ ಹಾಗೂ ಅತ್ತೆ ಸೇರಿ ನೇಣು ಬಿಗಿದು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟೆ ಗ್ರಾಮದಲ್ಲಿ ನಡೆದಿದೆ.
ರುಕ್ಸಾನಾ ದಢಾಕಿ (19) ಮೃತ ದುರ್ದೈವಿ ಗೃಹಿಣಿ. ಪತಿ ಅಮೀರಸಾಬ್ ದಢಾಕಿ, ಅತ್ತೆ ಶಬೀರಾ ದಢಾಕಿ ಎಂಬುವವರು ಕೊಲೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಗಳು ಆರೋಪಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ರುಕ್ಸಾನಾ ಮತ್ತು ಅಮೀರಸಾಬ್ ಮದುವೆಯಾಗಿದ್ದು, ಮದುವೆ ಆದಾಗಿನಿಂದ ವರದಕ್ಷಿಣೆಗಾಗಿ ಅಮೀರಸಾಬ್ ಮತ್ತು ಶಬೀರಾ ಪೀಡಿಸುತ್ತಿದ್ದರು. ಆದರೆ ವರದಕ್ಷಿಣೆ ತರಲು ರುಕ್ಸಾನಾ ಒಪ್ಪಿರಲಿಲ್ಲ. ಇದರ ವಿಷಯವಾಗಿ ಜಗಳವಾಗಿ ಜಗಳ ತಾರಕಕ್ಕೇರಿ ಪತಿ ಮತ್ತು ಅತ್ತೆ ಸೇರಿ ರುಕ್ಸಾನಾಳ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ.
ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸ್ರು ಬಂಧಿಸಿದ್ದಾರೆ.