ಮೈಸೂರು: ಪ್ರಿಯತಮನ ಜೊತೆ ಇರಲು ಪತಿ ಅಡ್ಡವಾಗಿದ್ದಾನೆ ಎಂದು ಪತ್ನಿ ತನ್ನ ಪ್ರಿಯತಮ ಜೊತೆ ಸೇರಿ ಪತಿಯನ್ನು ಕೊಂದು ಅದು ಅಪಘಾತ ಎಂದು ಬಿಂಬಿಸಿದ ಪ್ರಕರಣ ಈಗ ಬಯಲಾಗಿದೆ.
ಬಸವರಾಜ್ ಮೃತ ವ್ಯಕ್ತಿ. ಜನವರಿ 5 ರಂದು ಮೈಸೂರಿನ ಟಿ.ನರಸೀಪುರದಲ್ಲಿ ಕೊಳ್ಳೇಗಾಲ ತಾಲೂಕಿನ ಆಲನಹಳ್ಳಿ ಗ್ರಾಮದ ಬಸವರಾಜು ಮೃತ ದೇಹ ಪತ್ತೆಯಾಗಿತ್ತು. ಅಪಘಾತದಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಮೃತ ಬಸವರಾಜ್ ಪತ್ನಿ ಸವಿತಾ ಹಾಗೂ ಮಗಳು ಬಂದು ಮೃತದೇಹದ ಬಳಿ ಗೋಳಾಡಿದ್ದರು. ಆಗ ಸವಿತಾ ವರ್ತನೆ ಅನುಮಾನ ಮೂಡಿಸಿತ್ತು. ಹೀಗಾಗಿ ಪೊಲೀಸರು ಸವಿತಾಳನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ಕೊಲೆ ರಹಸ್ಯ ಬಯಲಾಗಿದೆ.
ಕೊಲೆಗೆ ಕಾರಣ?
ಐದು ವರ್ಷಗಳ ಹಿಂದೆ ಅಪಘಾತದಲ್ಲಿ ಬಸವರಾಜ್ ಕಾಲು ಕಳೆದುಕೊಂಡಿದ್ದರು. ಹೀಗಾಗಿ ಸವಿತಾ ಗಾರ್ಮೆಂಟ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಫ್ಯಾಕ್ಟರಿಯಲ್ಲಿ ನಿಂಗರಾಜು ಎಂಬಾತ ಪರಿಚಯವಾಗಿದ್ದನು. ದಿನಗಳೆದಂತೆ ಆತನ ಜೊತೆ ಸವಿತಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ ಕಾರಣ ಜನವರಿ 5 ರಂದು ಪ್ರಿಯಕರನ ಜೊತೆ ಸೇರಿ ಪತಿಯ ಉಸಿರುಗಟ್ಟಿಸಿ ಹತ್ಯೆಗೈದಿದ್ದಳು.
ಹತ್ಯೆಯ ಬಳಿಕ ಬಸವರಾಜು ಮೃತ ದೇಹವನ್ನು ಸೇಂಟ್ ರಾಬರ್ಟ್ ಶಾಲೆ ಬಳಿಯ ರಸ್ತೆಯಲ್ಲಿ ಹಾಕಿ ಅಮಾಯಕರಂತೆ ನಟಿಸಿದ್ದಳು. ಟಿ. ನರಸೀಪುರ ಪೊಲೀಸರು ಈಗ ಸವಿತಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv