Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲವರ್ ಜೊತೆ ಸೇರಿ ಮಾಜಿ ಪ್ರಿಯಕರನ ಮೇಲೆ ಕಾರ್ ಹರಿಸಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ಳು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಲವರ್ ಜೊತೆ ಸೇರಿ ಮಾಜಿ ಪ್ರಿಯಕರನ ಮೇಲೆ ಕಾರ್ ಹರಿಸಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ಳು

Latest

ಲವರ್ ಜೊತೆ ಸೇರಿ ಮಾಜಿ ಪ್ರಿಯಕರನ ಮೇಲೆ ಕಾರ್ ಹರಿಸಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ಳು

Public TV
Last updated: December 30, 2017 11:32 am
Public TV
Share
2 Min Read
murder
SHARE

ಥಾಣೆ: ಮಾಜಿ ಪ್ರಿಯಕರನ ಮೇಲೆ ಕಾರ್ ಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆತನ ಪ್ರಿಯಕರನನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಇದನ್ನು ಅಪಘಾತ ಎಂದು ತಿಳಿಯಲಾಗಿತ್ತು. ಆದ್ರೆ ಬಳಿಕ ಇದೊಂದು ಯೋಜಿತ ಸಂಚು ಎಂಬುದು ಗತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 18ರಂದು ಈ ಕೊಲೆ ನಡೆದಿತ್ತು. 46 ವರ್ಷದ ರಾಮ್‍ಜೀ ಶರ್ಮಾ ಕೊಲೆಯಾದ ವ್ಯಕ್ತಿ. ಥಾಣೆಯ ಅಜಾದ್ ನಗರ್ ಪ್ರದೇಶದಲ್ಲಿ ಬೆಳಗ್ಗಿನ ಜಾವ ವಾಕಿಂಗ್ ಮಾಡುವಾಗ ಶರ್ಮಾ ಮೇಲೆ ಕಾರ್ ಹರಿಸಲಾಗಿತ್ತು. ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಶರ್ಮಾ ಒಂದು ತಿಂಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

murder 3

ಜಯಪ್ರಕಾಶ್ ಮಂಗ್ರು ಚವಾನ್(32) ಹಾಗೂ ಸುಮಾರಿ ಯಾದವ್ (45) ಬಂಧಿತ ಆರೋಪಿಗಳು. ಜಯಪ್ರಕಾಶ್ ಕಾರ್ ಚಾಲಕನಾಗಿ ಕೆಲಸ ಮಾಡ್ತಿದ್ದ. ಸುಮಾರಿ ಯಾದವ್ ವಿವಾಹಿತಳಾಗಿದ್ದು ಐವರು ಮಕ್ಕಳಿದ್ದಾರೆ. ಈಕೆಗೆ ಹಲವು ಅಕ್ರಮ ಸಂಬಂಧಗಳಿದ್ದು, ಮಾಜಿ ಪ್ರಿಯಕರ ಶರ್ಮಾನನ್ನು ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ ಹಾಗೂ ಐಪಿಸಿ ಯ ಸೂಕ್ತ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ಮಾಡುವ ಸಂದರ್ಭದಲ್ಲಿ ಇದೊಂದು ಯೋಜಿತ ಸಂಚು ಎಂಬ ಬಗ್ಗೆ ಅನುಮಾನ ಮೂಡಿತ್ತು ಎಂದು ಡಿಸಿಪಿ ಸುನಿಲ್ ಲೋಖಂಡೆ ಹೇಳಿದ್ದಾರೆ.

murder 1

ಕಾರ್ ರಿಪೇರಿಯಿಂದ ಅನುಮಾನ: ಅಪಘಾತದ ನಂತರ ವಾಹನವನ್ನ ರಿಪೇರಿ ಮಾಡಿಸಲಾಗಿತ್ತು. ಜೊತೆಗೆ ವಾಹನದ ಬಣ್ಣ ಬದಲಾಯಿಸಿದ್ದರಿಂದ ಅನುಮಾನ ಹುಟ್ಟಿತ್ತು. ಅಪಘಾತ ನಡೆದ ಕೆಲವು ದಿನಗಳ ಬಳಿಕ ಸೂಕ್ತ ಮಾಹಿತಿ ಆಧರಿಸಿ ಪೊಲೀಸರು ಕಾರನ್ನ ಪತ್ತೆ ಮಾಡಿದ್ರು. ಆದ್ರೆ ಆಶ್ಚರ್ಯವೆಂಬಂತೆ ಕಾರನ್ನು ಆಗಲೇ ರಿಪೇರಿ ಮಾಡಿಸಲಾಗಿತ್ತು. ಕನ್ನಡಿ ಹಾಗೂ ಫಾಗ್ ಲ್ಯಾಂಪ್ ಬದಲಾಯಿಸಲಾಗಿತ್ತು. ಡೆಂಟ್ ಕೂಡ ಸರಿಪಡಿಸಿ, ಹೊಸದಾಗಿ ಪೇಂಟ್ ಮಾಡಿಸಲಾಗಿತ್ತು. ಇದರಿಂದ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಮೃತ ಶರ್ಮಾ ಅವರ ಮಗ ತನ್ನ ತಂದೆ ಲವರ್ ಜೊತೆ ಫೋನ್‍ನಲ್ಲಿ ಗಂಟೆಗಟ್ಟಲೆ ಮಾತಾಡುತ್ತಿದ್ದರು. ಅಪಘಾತಕ್ಕೆ ಕಲ ದಿನಗಳ ಮುಂಚೆ ಮಾತಾಡುತ್ತಿರಲಿಲ್ಲ ಎಂದು ಹೇಳಿದ್ದ. ಇದರಿಂದ ಹಿರಿಯ ಇನ್ಸ್ ಪೆಕ್ಟರ್‍ಗಳಾದ ಸತ್ತಾ ಧೋಲೆ ಹಾಗೂ ನಸೀರ್ ಕುಲಕರ್ಣಿ ಅವರಿಗೆ ಅನುಮಾನ ಮೂಡಿತ್ತು. ಜೊತೆಗೆ ಶರ್ಮಾ ಫೋನ್ ಪರಿಶೀಲಿಸಿದಾಗ ಸುಮಾರಿ ಯಾದವ್ ನಂಬರ್ ಸಿಕ್ಕಿತ್ತು.

ನಮಗೆ ಮಹಿಳೆಯ ನಂಬರ್ ಸಿಕ್ಕಿತ್ತು. ನಂತರ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದಾಗಿ ಘಟನೆ ನಡೆದ ಸಂದರ್ಭದಲ್ಲಿ ಶರ್ಮಾ ಹಾಗೂ ಚೌಹಾನ್‍ಗೆ ಅತೀ ಹೆಚ್ಚು ಕರೆಗಳನ್ನ ಮಾಡಿರುವುದು ತಿಳಿಯಿತು. ನಂತರ ಆಕೆಯನ್ನು ವಿಚಾರಣೆಗೆ ಕರೆದೆವು ಎಂದು ಪೊಲೀಸರು ಹೇಳಿದ್ದಾರೆ.

lover murder

ವಿಚಾರಣೆ ವೇಳೆ ಸುಮಾರಿ ಶರ್ಮಾ ಸೂಕ್ತ ಉತ್ತರಗಳನ್ನ ನೀಡುವಲ್ಲಿ ವಿಫಲಳಾಗಿದ್ದಳು. ನಂತರ ಸತ್ಯಾಂಶವನ್ನ ಬಾಯ್ಬಿಟ್ಟಳು. ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಶರ್ಮಾ ಆಕೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ ಬೆಳಗ್ಗಿನ ವಾಕಿಂಗ್ ಸಮಯದಲ್ಲಿ ಆಕೆ ಹಾಗೂ ಆಕೆಯ ಗಂಡನನ್ನು ಹಿಂಬಾಲಿಸಿ ಬರುತ್ತಿದ್ದ. ಇದರಿಂದ ಬೇಸತ್ತು ತನ್ನ ಪ್ರಿಯಕರ ಚೌಹಾನ್ ಜೊತೆ ಸೇರಿ ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚೌಹಾನ್ ಕೆಲವು ದಿನಗಳ ಕಾಲ ಶರ್ಮಾ ಚಲನವಲನವನ್ನು ಗಮನಿಸಿದ್ದ. ಅದರಂತೆ ನವೆಂಬರ್ 18ರಂದು ಶರ್ಮಾ ಮೇಲೆ ತನ್ನ ಕಾರ್ ಹರಿಸಿ ಪರಾರಿಯಾಗಿದ್ದ. ಸದ್ಯ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

TAGGED:accidentex loverloverMurderPublic TVwomanಅಪಘಾತಕೊಲೆಪಬ್ಲಿಕ್ ಟಿವಿಪ್ರಿಯಕರಮಾಜಿ ಪ್ರಿಯಕರ
Share This Article
Facebook Whatsapp Whatsapp Telegram

Cinema news

kantara chapter 1
ಜೀ ಕನ್ನಡ ವಾಹಿನಿಯಲ್ಲಿ ಬರಲಿದೆ ಕಾಂತಾರ ಚಾಪ್ಟರ್ 1
Cinema Latest Sandalwood Top Stories
Udaya Kannadiga 2025
ವರ್ಣರಂಜಿತ ಉದಯ ಕನ್ನಡಿಗ-2025 ಪುರಸ್ಕಾರದಲ್ಲಿ ತಾರಾಮೇಳ
Cinema Latest Sandalwood Top Stories TV Shows
Gilli Kavya 1
BBK 12 | ಗಿಲ್ಲಿಯನ್ನ ಮದ್ವೆ ಆಗ್ತೀರಾ ಅಂದಿದ್ದಕ್ಕೆ ಕಾವ್ಯ ಕೊಟ್ಟ ಉತ್ತರವೇನು?
Cinema Latest Top Stories TV Shows
Shivanna Gilli 1
ಶಿವಣ್ಣನ ಭೇಟಿಯಾದ ಬಿಗ್‌ಬಾಸ್ 12ರ ವಿನ್ನರ್ ಗಿಲ್ಲಿನಟ
Bengaluru City Cinema Districts Karnataka Latest Sandalwood Top Stories

You Might Also Like

shivamogg elderly couple dead body found in house at bhadravathi doctor arrested
Crime

ಭದ್ರಾವತಿ | ಅನಸ್ತೇಶಿಯಾ ಕೊಟ್ಟು ವೃದ್ಧ ದೊಡ್ಡಪ್ಪ, ದೊಡ್ಡಮ್ಮನನ್ನು ಕೊಂದ ವೈದ್ಯ

Public TV
By Public TV
2 minutes ago
young man was brutally murdered in Kalaburagi
Crime

ಕಲಬುರಗಿ | ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

Public TV
By Public TV
43 minutes ago
Rajeev Gowda 2
Chikkaballapur

ರಾಜೀವ್‌ ಗೌಡ ನಟೋರಿಯಸ್‌ ಕ್ರಿಮಿನಲ್‌, 16 ಕೇಸ್‌ ಇದೆ – ಶೀಘ್ರ ಬಂಧನ: ಎಸ್ಪಿ

Public TV
By Public TV
45 minutes ago
Fake Pizza Hut
Latest

‌ಪಾಕ್‌ಗೆ ಮತ್ತೆ ಮುಖಭಂಗ – ನಕಲಿ ಪಿಜ್ಜಾ ಹಟ್‌ ಉದ್ಘಾಟಿಸಿ ಮರ್ಯಾದೆ ಕೆಡಿಸಿಕೊಂಡ ಖವಾಜ ಆಸಿಫ್!

Public TV
By Public TV
1 hour ago
CT Ravi 1
Bengaluru City

ಸಿಎಂ ಇರುವಷ್ಟು ದಿನ ಚೀಲ ತುಂಬಿಸಿಕೊಳ್ಳೋಣ ಅಂತಿದ್ದಾರೆ, ಈ ಸರ್ಕಾರವೇ ಭ್ರಷ್ಟಾಚಾರದಲ್ಲಿದೆ: ಸಿ.ಟಿ ರವಿ ವಾಗ್ದಾಳಿ

Public TV
By Public TV
2 hours ago
Trainer aircraft of IAF crashes in Prayagraj
Latest

ಪ್ರಯಾಗ್‌ರಾಜ್‌ನಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್ ಸೇಫ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?