ಹಾವು ಕಚ್ಚಿತೆಂದು ಮಹಿಳೆಯನ್ನ ಸಗಣಿಯಲ್ಲಿ ಮುಚ್ಚಿದ ಜನ -ನರಳಿ..ನರಳಿ.. ಪ್ರಾಣಬಿಟ್ರು

Public TV
1 Min Read
Snake Death

ಲಕ್ನೋ: ಜನರು ಕೆಲವೊಮ್ಮೆ ಮೂಢನಂಬಿಕೆಗಳಿಗೆ ಯಾವ ಪ್ರಮಾಣದಲ್ಲಿ ಬಲಿಯಾಗ್ತಾರೆ ಅಂದ್ರೆ ಮನೆ ಸದಸ್ಯರ ಪ್ರಾಣ ಹೋದ್ರೂ ಆ ಮಾಯಾಜಾಲದಿಂದ ಹೊರಬರಲ್ಲ. ಇದೀಗ ಮೂಢನಂಬಿಕೆಗೆ ಮಹಿಳೆ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ಜಿಲ್ಲೆಯ ಕಕೋಡಾ ಪಟ್ಟಣದ ಬಳಿಯ ಗ್ರಾಮವೊಂದರಲ್ಲಿ ನಡೆದಿದೆ.

ದೇವಿಂದ್ರಿ ಮೂಢನಂಬಿಕೆಗೆ ಬಲಿಯಾದ ಮಹಿಳೆ. ದೇವಿಂದ್ರಿ ಗ್ರಾಮದ ಹೊರಲಯದಲ್ಲಿ ಕಟ್ಟಿಗೆಗಳನ್ನು ಜೋಡಿಸುತ್ತಿರುವಾಗ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಮನೆಗೆ ಬಂದ ದೇವೀಂದ್ರಿ, ಪತಿ ಮುಕೇಶ್‍ಗೆ ವಿಷಯವನ್ನು ತಿಳಿಸಿದ್ದಾರೆ.

snake 1524555032

ಬಹುಶಃ ಸಾಮಾನ್ಯ ಹಾವು ಕಚ್ಚಿದ್ದರಿಂದ ದೇವಿಂದ್ರಿ ಅಸ್ವಸ್ಥಗೊಂಡಿರಲಿಲ್ಲ. ಪತ್ನಿಗೆ ಹಾವು ಕಚ್ಚಿದ ವಿಷಯ ತಿಳಿದ ಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಸ್ಥಳೀಯ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಸ್ಥಳದಲ್ಲಿ ಗ್ರಾಮಸ್ಥರೆಲ್ಲಾ ಸೇರಿದ್ದಾರೆ. ಈ ಹಿಂದೆ ಹಾವು ಕಚ್ಚಿದವರಿಗೆ ನಾನೇ ಔಷಧಿ ನೀಡಿ ಹೀವ ಉಳಿಸಿದ್ದೀನಿ ಅಂತ ಹೇಳಿ ಚಿಕಿತ್ಸೆ ನೀಡಲು ಮುಂದಾಗಿದ್ದಾನೆ.

ಚಿಕಿತ್ಸೆ ನೀಡಲು ಬಂದ ವ್ಯಕ್ತಿ, ಮಹಿಳೆಯ ಪೂರ್ಣ ದೇಹವನ್ನು ಎಮ್ಮೆಯ ಸಗಣಿಯಿಂದ ಮುಚ್ಚಿದ್ದಾನೆ. ದೇವಿಂದ್ರಿ ಅವರ ಪೂರ್ಣ ದೇಹವನ್ನು ಸಗಣಿಯಿಂದ ಮುಚ್ಚಿದ ಬಳಿಕ ಕೆಲವು ಮಂತ್ರಗಳನ್ನು ಸಹ ಹೇಳಿದ್ದಾನೆ. ಕೆಲವು ಸಮಯದ ಬಳಿಕ ಮಹಿಳೆ ಕುಟುಂಬಸ್ಥರು ಸಗಣಿಯಿಂದ ದೇವಿಂದ್ರಿ ಅವರನ್ನು ಹೊರತಗೆಯಬಹುದಾ ಅಂತ ಕೇಳಿದ್ದಾರೆ.

Untitled design 4 23

 

ವ್ಯಕ್ತಿ ಕೊನೆಗೆ ಸಗಣಿಯಲ್ಲಿ ಮುಚ್ಚಲ್ಪಟ್ಟದಿಂದ ದೇವಿಂದ್ರಿಯನ್ನು ಹೊರ ತೆಗೆಯುವಂತೆ ಆದೇಶಿಸಿದ್ದಾನೆ. ಆದ್ರೆ ದೇವಿಂದ್ರಿ ಉಸಿರಾಡಲು ಗಾಳಿಯೂ ಸಿಗದೇ ನರಳಿ ನರಳಿ ಸಾವನ್ನಪ್ಪಿದ್ದಾರೆ. ಒಂದು ವೇಳೆ ದೇವಿಂದ್ರಿ ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ರೆ ಬದುಕುಳಿಯುತ್ತಿದ್ರು.

Share This Article
Leave a Comment

Leave a Reply

Your email address will not be published. Required fields are marked *