ಲಕ್ನೋ: ಅಡುಗೆ ಮಾಡುವುದನ್ನು ತಡ ಮಾಡಿದ್ದಕ್ಕೆ ಅತ್ತೆಯೊಬ್ಬಳು ಸೊಸೆಯ ಬೆರಳುಗಳನ್ನು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಹರಗೋವಿಂದ್ ನಗರದಲ್ಲಿ ಶನಿವಾರ ನಡೆದಿದ್ದು, ಆರೋಪಿ 65 ವರ್ಷದ ಸುಶೀಲಾ ದೇವಿ ಅತ್ತೆ, ಪ್ರೀತಿ ಬೆರಳುಗಳನ್ನು ಕತ್ತರಿಸಿದ್ದಾಳೆ. ಈ ಘಟನೆಯ ನಂತರ ಆರೋಪಿ ಸುಶೀಲಾ ದೇವಿ ನಾಪತ್ತೆಯಾಗಿದ್ದಾಳೆ.
ಸೊಸೆ ಪ್ರೀತಿ ತನ್ನ ಮಗುವಿಗೆ ಹಾಲು ಕುಡಿಸುತ್ತಿದ್ದರು. ಇದೇ ವೇಳೆ ಅತ್ತೆ ಬಂದು ಅಡುಗೆ ಮಾಡುವಂತೆ ಸೊಸೆಗೆ ಹೇಳಿದ್ದಾಳೆ. ಆಗ ಸೊಸೆ ಮಗುವಿಗೆ ಹಾಲು ಕುಡಿಸಿದ ನಂತರ ಅಡುಗೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಅತ್ತೆ ಮಾನವೀಯತೆ ಇಲ್ಲದೇ ಚಾಕು ತೆಗೆದುಕೊಂಡು ಸೊಸೆಯ ಬಲಗೈ ಬೆರಳುಗಳನ್ನು ಕತ್ತರಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಉಪೇಂದ್ರ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ. ಆದರೆ ಆರೋಪಿ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಸದ್ಯಕ್ಕೆ ಪೊಲೀಸರು ಆರೋಪಿ ಅತ್ತೆ ವಿರುದ್ಧ ಐಪಿಸಿ 323 ಮತ್ತು 504 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ನೋವಿನಂದ ನರಳುತ್ತಿದ್ದ ಸೊಸೆ ಪ್ರೀತಿಯನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv