ಇಬ್ಬರ ಜೊತೆ ಸೇರಿ ಸೇರಿ 27ರ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಆಂಟಿ..!

Public TV
3 Min Read
MUMBAI POLICE
An ambulance enters the street where 11 family members were found dead inside their home in the neighbourhood of Burari in New Delhi on July 1, 2018. - Police have cordoned off the home in Burari in the north of the capital where the bodies of seven women and four men were discovered July 1. "10 of the 11 family members were found hanging when we reached the house. The last, a 75-year-old female, was dead on the floor," a Delhi police official told AFP. (Photo by Sajjad HUSSAIN / AFP)

ಮುಂಬೈ: ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಬೇಕೆಂದು ಪೀಡಿಸುತ್ತಿದ್ದ 27 ವರ್ಷದ ಯುವಕನೊಬ್ಬನ ಮರ್ಮಾಂಗವನ್ನೇ 42 ವರ್ಷದ ಆಂಟಿ ಕತ್ತರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಈ ಘಟನೆ ಮುಂಬೈ ಸಮೀಪದ ದೊಂಬಿವಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಇಬ್ಬರು ಸಹಚರರನ್ನು ಮನ್ಪದಾ ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಾಳುವನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂಬುದಾಗಿ ವರದಿಯಾಗಿದೆ.

ಘಟನೆ ವಿವರ:
ದೊಂಬಿವಲಿಯ ನಂದಗಾವ್ ನಿವಾಸಿ ತುಷಾರ್ ಪೂಜಾರೆ(27) ಎಂಬಾತ 42 ವರ್ಷದ ಮಹಿಳೆಗೆ ಕಿರುಕುಳ ನೀಡುತ್ತಿದ್ದನು. ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಬೇಕು ಎಂದು ಯುವಕನ ಹಠ ಹಿಡಿದಿದ್ದಾನೆ. ಆದ್ರೆ ಮಹಿಳೆ ಇದಕ್ಕೆ ನಿರಾಕರಿಸಿದ್ದಾಳೆ.  ಇಷ್ಟಾದ್ರೂ ಬಿಡದ ಯುವಕ ಆಕೆಯ ಜೊತೆ ಮತ್ತಷ್ಟೂ ಕ್ಲೋಸ್ ಆಗಲು ಪ್ರಯತ್ನಿಸಿದ್ದಾನೆ.

MUMBAI CRIME

ಹೀಗೆ ಒಂದು ದಿನ ಯುವಕ ನೇರವಾಗಿ ಮಹಿಳೆಯ ಮನೆಗೆ ಬಂದಿದ್ದಾನೆ. ಅಲ್ಲದೇ ತಾನು ಮಹಿಳೆಯನ್ನು ಮದುವೆಯಾಗುವುದಾಗಿ ಆಕೆಯ ಪತಿ ಜೊತೆ ಹೇಳಿದ್ದಾನೆ. ಹೀಗಾಗಿ ಮಹಿಳೆ ಮತ್ತು ಆಕೆಯ ಪತಿ ಮಧ್ಯೆ ದೊಡ್ಡ ಜಗಳವೇ ನಡೆದು ಹೋಯಿತು. ಇದರಿಂದ ಬೇಸತ್ತ ಆಂಟಿ ಯುವಕನಿಗೆ ಪಾಠ ಕಲಿಸಬೇಕೆಂದು ಒಂದು ಉಪಾಯ ಹೂಡಿದಳು. ತನ್ನ ಈ ಪ್ಲಾನ್ ಗೆ ಇಬ್ಬರು ಯುವಕರ ಸಹಾಯನೂ ಪಡೆದುಕೊಂಡಳು.

ಮಹಿಳೆ ತನ್ನ ಬೆನ್ನ ಹಿಂದೆ ಬೀಳದಂತೆ ಸಾಕಷ್ಟು ಬಾರಿ ತುಷಾರ್ ಗೆ ಎಚ್ಚರಿಕೆ ನೀಡಿದ್ದಳು. ಆದ್ರೆ ತುಷಾರ್ ಮಾತ್ರ ಮಹಿಳೆಯ ಮಾತನ್ನು ಕೇಳುವ ಗೋಜಿಗೆ ಹೋಗಿಲ್ಲ. ಅಲ್ಲದೇ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸುವ ಮೂಲಕ ಮಹಿಳೆಯನ್ನು ತನ್ನತ್ತ ಸೆಳೆಯುವ ಹಲವಾರು ವ್ಯರ್ಥ ಪ್ರಯತ್ನಗಳನ್ನು ಮಾಡಿದ್ದನು ಅಂತ ಪೊಲೀಸ್ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.

CRIME 1

ಇದೇ ತಿಂಗಳ 25ರಂದು ಸಂಜೆ 7 ಗಂಟೆ ಸುಮಾರಿಗೆ ನನ್ನ ಸಹೋದರನಿಗೆ ತೇಜಸ್ ಮರಾಠೆ ಎಂಬಾತನಿಂದ ಕರೆ ಬಂದಿತ್ತು. ಈ ವೇಳೆ ಲೋನ್ ವಿಚಾರವಾಗಿ ಸ್ವಲ್ಪ ಮಾತನಾಡಲು ಇದೆ. ಹೀಗಾಗಿ ತನ್ನನ್ನು ಭೇಟಿಯಾಗುವಂತೆ ತೇಜಸ್ ಹೇಳಿದ್ದಾನೆ. ಅಂತೆಯೇ ಆತನನ್ನು ಭೇಟಿಯಾಗಲು ತುಷಾರ್ ಹೋಗಿದ್ದನು. ರಾತ್ರಿ ಸುಮಾರು 9.40ರ ವೇಳೆಗೆ ಮತ್ತೊಂದು ಕರೆ ಬಂದಿದೆ. ಈ ಕರೆಯನ್ನು ಪತ್ನಿ ಸ್ವಪ್ನಾಲಿ ಸ್ವೀಕರಿಸಿದ್ದಾರೆ. ತುಷಾರ್ ನಂಬರಿನಿಂದಲೇ ಬಂದ ಕರೆ ಸ್ವೀಕರಿಸಿದಾಗ, ಆ ಕಡೆಯಿಂದ ತುಷಾರ್ ಗೆ ಗಂಭೀರ ಗಾಯಗಳಾಗಿವೆ. ಸದ್ಯ ಆತನನ್ನು ಸ್ಥಳೀಯ ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ತಿಳಿಸಲಾಗಿತ್ತು ಅಂತ ತುಷಾರ್ ಸಹೋದರ ಸ್ವಪ್ನಿಲ್ ಪೂಜಾರೆ ತಿಳಿಸಿದ್ದಾರೆ.

ಕರೆ ಕಟ್ ಆದ ತಕ್ಷಣವೇ ಸ್ವಪ್ನಿಲ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದ್ರೆ ಅಲ್ಲಿ ತುಷಾರ್ ನನ್ನು ಕಂಡು ಆಘಾತಕ್ಕೀಡಾದ್ರು. ಯಾಕಂದ್ರೆ ತುಷಾರ್‍ಗೆ ಯಾರೋ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಆತನ ಮರ್ಮಾಂಗವನ್ನೂ ಕತ್ತರಿಸಲಾಗಿತ್ತು. ಘಟನೆಯಿಂದ ಗಂಭೀರ ಸ್ಥೀತಿಯಲ್ಲಿದ್ದ ತುಷಾರ್‍ನನ್ನು ಆತನ ಕುಟುಂಬ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ದೂರು ಸ್ವೀಕರಿಸಿದ ಮನ್ಸಪದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

MUMBAI CRIME 1

ತಪ್ಪೊಪ್ಪಿಕೊಂಡ ಆರೋಪಿಗಳು:
ತನಿಖೆ ನಡೆಸಿದಾಗ ಈ ಘಟನೆಯಲ್ಲಿ ಮೂವರು ಈ ಕೃತ್ಯ ಎಸಗಿರುವುದಾಗಿ ಬೆಳಕಿಗೆ ಬಂದಿದೆ. ಇದರಲ್ಲಿ ಓರ್ವ ಮಹಿಳೆಯೂ ಸೇರಿರುವುದಾಗಿ ತಿಳಿದು ಬರುತ್ತದೆ. ಕೂಡಲೇ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಯಶವಂತ್ ನಗರ್ ಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಒಂದು ಪ್ರದೇಶಕ್ಕೆ ತುಷಾರ್ ನನ್ನು ಕರೆಸಿದ ಮಹಿಳೆ, ತನ್ನಿಬ್ಬರು ಸಹಚರರ ಜೊತೆ ಸೇರಿ ಆತನಿಗೆ ಚೆನ್ನಾಗಿ ಥಳಿಸಿದ್ದಾಳೆ. ಬಳಿಕ ಚಾಕುವಿನಿಂದ ತುಷಾರ್ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಅನ್ನೋದು ಬೆಳಕಿಗೆ ಬಂದಿದೆ.

PLAIN TEMPLATE copy 1

ಘಟನೆಯ ಬಳಿಕ ಆರೋಪಿಗಳೇ ತುಷಾರ್ ನನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಪ್ರಕರಣ ಸಂಬಂಧ ರಚನಾ, ತೇಜಸ್ ಮರಾಠೆ ಹಾಗೂ ಸತೀಶ್ ವಿರುದ್ಧ 307(ಕೊಲೆ ಯತ್ನ), 120ಬಿ(ಪಿತೂರಿ), 325( ಸ್ವಯಂಪ್ರೇರಿತ ಹಾನಿ), 342(ಅಕ್ರಮವಾಗಿ ಕೂಡಿಹಾಕು), 352(ಕ್ರಿಮಿನಲ್) ಮೊದಲಾದ ಐಪಿಸಿ ಸೆಕ್ಷನ್ ಗಳನ್ನು ಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *