ಪತಿಯಿಂದ್ಲೇ ಬಿಜೆಪಿ ನಾಯಕಿಯ ಬರ್ಬರ ಕೊಲೆ!

Public TV
2 Min Read
munesh godra

– ಫೋನ್‍ನಲ್ಲಿ ಮಾತಾಡ್ತಿದ್ದಾಗಲೇ ಹತ್ಯೆ
– ಸಾಯೋಕು ಮುನ್ನ ಕುಟುಂಬಕ್ಕೆ ತಿಳಿಸಿದ್ಳು

ಚಂಢೀಗಡ: ಪತಿಯಿಂದಲೇ ಬಿಜೆಪಿ ನಾಯಕಿಯೊಬ್ಬಳು ಬರ್ಬರವಾಗಿ ಹತ್ಯೆಗೀಡಾದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯಲ್ಲಿ ಮುನೇಶ್ ಗೋದಾರ(34) ಎಂದು ಗುರುತಿಸಲಾಗಿದೆ. ಈಕೆ ಭಾರತೀಯ ಜನತಾ ಪಾರ್ಟಿಯ ಕಿಸಾನ್ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಈ ಘಟನೆ ಗುರುಗ್ರಾಮದ 93 ಸೆಕ್ಟರ್ ನಲ್ಲಿ ನಡೆದಿದ್ದು, ಇಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮುನೇಶ್ ನನ್ನು ಪತಿ ಸುನಿಲ್ ಕೊಲೆ ಮಾಡಿ ಪರಾರಿಯಾಗಿದ್ದಾನೆ.

bjp

ಕೊಲೆ ಯಾಕೆ?
ಆರೋಪಿ ಸುನಿಲ್ ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದನು. ಇದೇ ಅನುಮಾನದಿಂದಾಗಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಒಂದು ದಿನ ಅಕ್ರಮ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿ ಇಬ್ಬರ ಮಧ್ಯೆ ಜಗಳವಾಗಿದೆ. ಆ ಬಳಿಕ ನಾಯಕಿ ತನ್ನ ಕುಟುಂಬದವರ ಜೊತೆ ಫೋನಿನಲ್ಲಿ ಮತನಾಡುತ್ತಿದ್ದಳು. ಇದೇ ವೇಳೆ ಆಕೆಯನ್ನು ಗುಂಡಿಟ್ಟು ಕೊಲೆ ಮಾಡಿದ್ದಾನೆ.

ನಾಯಕಿ ಸಹೋದರ ಎಸ್.ಕೆ ಜಖಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಮುನೇಶ್ ತನ್ನ ಸಹೋದರಿ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಇದೇ ವೇಳೆ ಆಕೆಯ ಪತಿ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಅಲ್ಲದೆ ಆಕೆ ಫೋನಿನಲ್ಲೇ ಪತಿ ತನಗೆ ಗುಂಡಿಕ್ಕಿದ ವಿಚಾರ ತಿಳಿಸಿರುವುದಾಗಿ ಹೇಳಿದ್ದಾನೆ.

ಆರೋಪಿ ಸುನಿಲ್, ಕಂಪನಿಯೊಂದರ ಸೆಕ್ಯುರಿಟಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದನು. ಈತ ಬಿಜೆಪಿ ನಾಯಕನೊಬ್ಬನ ಜೊತೆ ತನ್ನ ಪತ್ನಿ ಸಂಬಂಧ ಹೊಂದಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾನೆ.

ಘಟನೆ ನಡೆದ ಕೂಡಲೇ ಸುನಿಲ್ ತಂದೆ ಗುರುಗ್ರಾಮ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಸುನಿಲ್ ಶನಿವಾರ ರಾತ್ರಿ ವಿಪರೀತವಾಗಿ ಕುಡಿದು ಬಂದಿದ್ದನು. ಪತಿ ಮನೆಗೆ ಬಂದ ಬಳಿಕ ಪತ್ನಿ, ಅಡುಗೆ ಮನೆಗೆ ತೆರಳಿ ಫೋನಿನಲ್ಲಿ ಮಾತನಾಡುತ್ತಿದ್ದಳು. ಮೊದಲೇ ಪತ್ನಿ ಮೇಲೆ ಅನುಮಾನವಿದ್ದ ಸುನಿಲ್, ಈಕೆ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಕಂಡು ಸಿಟ್ಟುಗೊಂಡು ಅಲ್ಲೇ ಇದ್ದ ರಿವಾಲ್ವರ್ ತೆಗೆದು ಪತ್ನಿಯ ಎದೆ ಹಾಗೂ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ಬಿಜೆಪಿ ನಾಯಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Police Jeep 1 1

ಇತ್ತ ಪತ್ನಿ ಮೃತಪಟ್ಟಿದ್ದಾಳೆಂದು ತಿಳಿದ ಕೂಡಲೇ ಆರೋಪಿ ಸುನಿಲ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಮುನೇಶ್, ಜಜ್ಜರ್ ಜಿಲೆಲಯ ನೌಗಾಂವ್ ಗ್ರಾಮದವಳಾಗಿದ್ದು, ಭಾನುವಾರ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ನಾಮ ನಿರ್ದೇಶಿತರಾಗಿ ಕೆಲಸ ಮಾಡಿದ್ದಳು.

Share This Article
Leave a Comment

Leave a Reply

Your email address will not be published. Required fields are marked *