ಕೃಷಿಹೊಂಡದಲ್ಲಿ ಮಹಿಳೆ, ಬಾಲಕಿಯ ಶವ ಪತ್ತೆ

Public TV
1 Min Read
CKB DEATH

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಗ್ರಾಮದ ಬಳಿಯ ಕೃಷಿ ಹೊಂಡದಲ್ಲಿ ಮಹಿಳೆ ಹಾಗೂ ಬಾಲಕಿಯ ಶವಪತ್ತೆಯಾಗಿದೆ.

ಖಾಸಗಿ ಬೀಜ ಕಂಪನಿ ಮಾನ್ಸೆಂಟೊ ಸೇರಿದ ಕೃಷಿಹೊಂಡದಲ್ಲಿ 25 ವರ್ಷದ ಮಹಿಳೆ ಹಾಗೂ 8 ವರ್ಷದ ಬಾಲಕಿಯ ಅಪರಿಚಿತ ಮೃತದೇಹಗಳ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗೌರಿಬಿದನೂರು ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ckb

ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರ ಅಥವಾ ಯಾರಾದರೂ ಕೊಲೆ ತಂದೆ ಕೃಷಿಹೊಂಡಕ್ಕೆ ಹಾಕಿದ್ದಾರ ಎನ್ನುವ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ. ಇದುವರೆಗೂ ಮಹಿಳೆ ಮತ್ತು ಬಾಲಕಿಯ ಹೆಸರು, ವಿವರಗಳು ಪತ್ತೆಯಾಗಿಲ್ಲ. ಆದರೆ ಬೆಂಗಳೂರಿನ ಸ್ಯಾಟ್‍ಲೈಟ್ ನಿಂದ ಮೆಜೆಸ್ಟಿಕ್‍ಗೆ ಬಂದಿರುವ ಮಹಿಳೆ ಬಳಿಕ ಮೆಜೆಸ್ಟಿಕ್‍ನಿಂದ ಹಿಂದೂಪುರಕ್ಕೆ ಟಿಕೆಟ್ ತೆಗೆದುಕೊಂಡಿದ್ದಾರೆ. ಆ ಟಿಕೆಟ್ ಹಾಗೂ ಜೊತೆಗೆ ಒಂದು ಫೋಟೋ ಕೃಷಿಹೊಂಡದ ಬಳಿ ಪತ್ತೆಯಾಗಿದೆ.

ಈ ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *