ಪತ್ನಿ ಖಾಸಗಿ ಅಂಗಕ್ಕೆ ಚಾಕುವಿನಿಂದ ಹಲ್ಲೆ – ಉಪ್ಪು ಹಾಕಿ ವಿಕೃತಿ ಮೆರೆದ ಪತಿ

Public TV
1 Min Read
couple

ರಾಂಚಿ: ಪತಿಯೊಬ್ಬ ತನ್ನ ಪತ್ನಿಯ ಖಾಸಗಿ ಅಂಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಬಳಿಕ ಉಪ್ಪಿನಿಂದ ಉಜ್ಜಿ ವಿಕೃತಿ ಮೆರೆದ ಘಟನೆ ಗುರುವಾರ ಜಾರ್ಖಂಡ್‍ನ ರಾಮ್‍ಗರ್ ನಲ್ಲಿ ನಡೆದಿದೆ.

ಶಿವ ಶಂಕರ್ ಹಲ್ಲೆ ಮಾಡಿದ ಪತಿ. ಶಿವ ಶಂಕರ್ ಸೆಂಟ್ರಲ್ ಕೋಲ್‍ಫಿಲ್ಡ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಗುರುವಾರ ಯಾವುದೋ ವಿಷಯಕ್ಕೆ ಶಿವ ಶಂಕರ್ ಪತ್ನಿಯ ಖಾಸಗಿ ಅಂಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸಾಲದು ಎಂದು ಉಪ್ಪಿನಿಂದ ಉಜ್ಜಿ ವಿಕೃತಿ ಮೆರೆದಿದ್ದಾನೆ.

Arrest 1

ಪತಿಯ ಹಲ್ಲೆಯ ಬಳಿಕ ಪತ್ನಿ ರಾಮ್‍ಗರ್ ಪೊಲೀಸ್ ಠಾಣೆಗೆ ಹೋಗಿ ಡಿಎಸ್‍ಪಿ ಪ್ರಕಾಶ್ ಸಾಯ್ ಬಳಿ ತನ್ನ ಪತಿ ಶಿವ ಶಂಕರ್ ವಿರುದ್ಧ ದೂರು ದಾಖಲಿಸಿದ್ದಾಳೆ. ಮಹಿಳೆಯ ದೂರಿನ ಮೆರೆಗೆ ಪೊಲೀಸರು ಶಿವ ಶಂಕರ್ ನನ್ನು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.

ಶಿವಶಂಕರ್‍ ನನ್ನು ಗುರುವಾರ ಬೆಳಗ್ಗೆ ಬಂಧಿಸಿದ್ದೇವೆ. ಸದ್ಯ ಮಹಿಳೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವ ಹಾಗೂ ಮಹಿಳೆಗೆ ಮಗಳು ಸೇರಿ ಮೂವರು ಅಪ್ರಾಪ್ತ ಮಕ್ಕಳಿದ್ದಾರೆ ಎಂದು ಡಿಎಸ್‍ಪಿ ಪ್ರಕಾಶ್ ಸಾಯ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *