ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಗ್ಗೆ ಕೋಚ್ ಗೌತಮ್ ಗಂಭೀರ (Gautam Gambhir) ಮೌನ ಮುರಿದಿದ್ದಾರೆ. ಮುಂದೆ ನಡೆಯಲಿರುವ ಸಿಡ್ನಿ ಟೆಸ್ಟ್ (Sydney Test) ಕ್ರಿಕೆಟ್ಗೆ ಪ್ರಮುಖ ಆಟಗಾರರ ಕೈಬಿಡುವ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯವನ್ನು ನಾಯಕ ರೋಹಿತ್ ಶರ್ಮಾ (Rohit Sharma) ಮುನ್ನಡೆಸುತ್ತಾರೆಯೇ ಎಂಬುದನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿಲ್ಲ. ಇದನ್ನೂ ಓದಿ: ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ಗುಡ್ಬೈ? – ಹಿಂಟ್ ಕೊಟ್ಟ ರವಿ ಶಾಸ್ತ್ರಿ
ರೋಹಿತ್ ಜೊತೆಯಲ್ಲಿ ಎಲ್ಲವೂ ಚೆನ್ನಾಗಿದೆ. ಪಿಚ್ ನೋಡಿದ ನಂತರ ನಾವು ನಾಳೆ (ಜ.11) ಘೋಷಿಸುತ್ತೇವೆ ಎಂದು ಗಂಭೀರ್ ಹೇಳಿದ್ದಾರೆ. ನಾಳೆ ತಂಡದ ಆಟಗಾರರ ಅಂತಿಮ ಪಟ್ಟಿ ಹೊರಬೀಳಲಿದೆ
ರೋಹಿತ್ ಆ ತಂಡದಲ್ಲಿ ಇರುತ್ತಾರೆಯೇ ಎಂದು ನಿರ್ದಿಷ್ಟವಾಗಿ ಕೇಳಿದಾಗ, ‘ನಾನು ಹೇಳಿದಂತೆ, ನಾವು ವಿಕೆಟ್ ಅನ್ನು ನೋಡಲಿದ್ದೇವೆ ಎಂದು ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ತಂಡದಲ್ಲಿ ಇರುತ್ತಾರೆಯೇ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್ಗಳ ಭರ್ಜರಿ ಗೆಲುವು
ನಾಯಕ ರೋಹಿತ್ ಆಸ್ಟ್ರೇಲಿಯಾ ವಿರುದ್ಧ ನಡೆದ ಐದು ಪಂದ್ಯಗಳ ಸರಣಿಯ ಮೊದಲ ನಾಲ್ಕು ಟೆಸ್ಟ್ಗಳಲ್ಲಿ ರನ್ಗಾಗಿ ಹೆಣಗಾಡಿದ್ದಾರೆ. ಈ ವಾರದ ಆರಂಭದಲ್ಲಿ ಮೆಲ್ಬರ್ನ್ನಲ್ಲಿ ಭಾರತ ಸೋತ ನಂತರ 2-1 ರಿಂದ ಹಿನ್ನಡೆಯಲ್ಲಿದೆ.