ಬೆಂಗಳೂರು: ಮಾಜಿ ಗೃಹ ಸಚಿವ ಆರ್. ಅಶೋಕ್ ಅವರಿಗೆ ಬಂಧನ ಭೀತಿ ಎದುರಾಗಿದೆ.
ಬಗರ್ ಹುಕುಂ ಜಮೀನು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಎಸಿಬಿ ದಾಖಲಿಸಿರೋ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ಗೆ ಆರ್ ಅಶೋಕ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ನ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಲಿದೆ.
ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಎಸಿಬಿ ಬಂಧಿಸಿದೆ. ಅಶೋಕ್ ಅವರನ್ನ ಬಂಧಿಸೋ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಅರ್ಜಿಯ ವಿಚಾರಣೆ ಮುಗಿಯುವವರೆಗು ಎಸಿಬಿ ವಿಚಾರಣೆಗೆ ತಾತ್ಕಾಲಿಕ ತಡೆ ನೀಡುವಂತೆ ಅಶೋಕ್ ಪರ ವಕೀಲರು ಮನವಿ ಮಾಡೋ ಸಾಧ್ಯತೆ ಇದೆ.
ಒಂದು ವೇಳೆ ತನಿಖೆಗೆ ಕೋರ್ಟ್ ತಡೆ ನೀಡಿದರೆ ಆರ್.ಅಶೋಕ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗುತ್ತದೆ. ಒಂದು ವೇಳೆ ತಡೆ ನೀಡದಿದ್ದರೆ ಅಶೋಕ್ ಅವರಿಗೆ ಬಂಧನ ಭೀತಿ ಎದುರಾಗಲಿದೆ.