ಹೈದರಾಬಾದ್: ಈ ಬಾರಿ ತೆಲಂಗಾಣ (Telangana) ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದ್ರೆ ನಿಜಾಮರ ಸಂಸ್ಕೃತಿ ಬಿಂಬಿಸುವ ರಚನೆಗಳನ್ನ ಅಳಿಸಿ ಹಾಕ್ತೇವೆ. ರಾಜ್ಯ ಕಾರ್ಯದರ್ಶಿಗಳ ಭವನದ ಮೇಲೆ ನಿರ್ಮಿಸಿರುವ ಗುಮ್ಮಟವನ್ನೂ ಕೆಡವುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಹೇಳಿದ್ದಾರೆ.
ಇಲ್ಲಿನ ಕುಕಟ್ಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಓವೈಸಿ ಅವರನ್ನ ಸಮಾಧಾನಪಡಿಸುವುದಕ್ಕಾಗಿ ಸಿಎಂ ಕೆ.ಚಂದ್ರಶೇಖರ ರಾವ್ (K. Chandrashekar Rao), ಸರ್ಕಾರಿ ಭವನಗಳನ್ನು ತಾಜ್ಮಹಲ್ನಂತಹ (Taj Mahal) ಸಮಾಧಿ ರೀತಿಯಾಗಿ ಪರಿವರ್ತಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಿಜಾಮರ ಸಂಸ್ಕೃತಿ ಬಿಂಬಿಸುವ, ನಿಜಾಮ್ ಆಡಳಿತ ಸಂಕೇತಗಳಾಗಿರುವ ಎಲ್ಲಾ ರೀತಿಯ ರಚನೆಗಳನ್ನು ಅಳಿಸಿ ಹಾಕುತ್ತೇವೆ. ಅಲ್ಲದೇ ರಾಜ್ಯ ಕಾರ್ಯದರ್ಶಿ ಆಡಳಿತ ಭವನದ ಮೇಲೆ ನಿರ್ಮಿಸಲಾದ ಗುಮ್ಮಟವನ್ನೂ ಕೆಡವುತ್ತೇವೆ. ಮುಖ್ಯಮಂತ್ರಿಗಳ ಅಧಿಕೃತ ಬಂಗಲೆಯಾದ ಪ್ರಗತಿ ಭವನವನ್ನು ಪ್ರಜಾ ದರ್ಬಾರ್ ಆಗಿ ಬದಲಾಯಿಸುತ್ತೇವೆ ಎಂದು ಘೋಷಣೆ ಮಾಡಿದರು. ಇದನ್ನೂ ಓದಿ: ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ
ಇದೇ ವೇಳೆ `ರಸ್ತೆ ಅಗಲೀಕರಣಕ್ಕೆ ಅಡ್ಡಿ ಉಂಟುಮಾಡುವ ಪ್ರಾರ್ಥನಾ ಮಂದಿರಗಳನ್ನ ಸರ್ಕಾರ ಕೆಡವಲಿದೆ’ ಎಂಬ ಸಿಎಂ ಕೆಸಿಆರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾಧ್ಯವಾದರೇ ರಸ್ತೆ ಮಧ್ಯೆ ನಿರ್ಮಿಸಿರುವ ಮಸೀದಿಗಳನ್ನ ಕೆಡವಲಿ ಎಂದು ಸವಾಲು ಹಾಕಿದರು.
ಹೈದರಾಬಾದ್ ನಗರದ ಕುಕಟ್ ಪಲ್ಲಿಯಲ್ಲಿ ಆಡಳಿತ ಪಕ್ಷದ ನಾಯಕರು ಬಡವರ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜನರು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಅವರನ್ನ ಬಂಧಿಸಿ, ಸುಳ್ಳು ಕೇಸ್ಗಳನ್ನ ದಾಖಲಿಸಿದ್ದಾರೆ. ಅಂಥಹವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k