ಕೂಚ್ ಬೆಹಾರ್ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರ ಮೊಣಕಾಲು ಮುರಿಯುತ್ತೇವೆ: ಉದಯನ್ ಗುಹಾ

Public TV
1 Min Read
Udayan Guha

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಿರುವವರ ಮೊಣಕಾಲು ಮುರಿಯುವುದಾಗಿ ಬೆದರಿಕೆ ಹಾಕುವ ಮೂಲಕ ತೃಣಮೂಲ ಕಾಂಗ್ರೆಸ್ ಶಾಸಕ ಉದಯನ್ ಗುಹಾ ಅವರು ವಿವಾದಕ್ಕೀಡಾಗಿದ್ದಾರೆ.

Mamata 1

ತೂಫಂಗಂಜ್ ಪುರಸಭೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯ ಪರ ಶುಕ್ರವಾರ ಪ್ರಚಾರ ನಡೆಸುವ ವೇಳೆ ಮಾತನಾಡಿದ ಅವರು, ಟಿಎಂಸಿ ಕಾರ್ಯಕರ್ತರ ಮೇಲೆ “ದೌರ್ಜನ್ಯ” ನಡೆಸಿದರೆ ಬಿಜೆಪಿ ನಾಯಕರ ಸ್ನಾಯುಗಳನ್ನು ಮುರಿದು ಕಳುಹಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ

Udayan Guha

ಪ್ರತ್ಯೇಕ ಕೂಚ್ ಬೆಹಾರ್ ರಾಜ್ಯದ ಬೇಡಿಕೆಯನ್ನು ಯಾರಾದರೂ ಎತ್ತಿದರೆ, ಅವರ ಮೊಣಕಾಲು ಹಾಗೇ ಇರುವುದಿಲ್ಲ. ಯಾರಾದರೂ ಕೂಚ್ ಬೆಹಾರ್ ರಾಜ್ಯತ್ವವನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದರೆ, ನಾವು ಆ ವ್ಯಕ್ತಿಯ ಮೊಣಕಾಲು ಮುರಿಯುತ್ತೇವೆ ಎಂದಿದ್ದಾರೆ.

ಉದಯನ್ ಗುಹಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕಿ ಮಾಲತಿ ರಾವಾ ಅವರು, ಉದಯನ್ ಗುಹಾಗೆ ನನ್ನ ಕಾಲು ಮುರಿಯುವ ಧೈರ್ಯವಿದೆ. ಶೀಘ್ರದಲ್ಲೇ ನಾವು ಅವರ ಕ್ಷೇತ್ರದಲ್ಲಿ ರ್‍ಯಾಲಿ ನಡೆಸುತ್ತೇವೆ. ಯಾರು ಯಾರ ಕೈಕಾಲು ಮುರಿಯುತ್ತಾರೆ ಎಂಬುದನ್ನು ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ನಿರ್ದೇಶಕ ಪ್ರೇಮ್..?

Share This Article
Leave a Comment

Leave a Reply

Your email address will not be published. Required fields are marked *