ನವದೆಹಲಿ: ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ದ (Viksit Bharat) ಕನಸು ನನಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭರವಸೆ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ 25 ವರ್ಷಗಳು ನಮಗೆ ಅತ್ಯಂತ ನಿರ್ಣಾಯಕ. ರಾಜಕೀಯವನ್ನು ಒಂದೆಡೆ ಇರಿಸಿ, ನಮ್ಮ ರಾಷ್ಟ್ರದ ಆಶಯಗಳು ಈಗ ಮುಖ್ಯವಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತವು ತನ್ನ ವಿಕಸಿತ ಭಾರತದ ಕನಸನ್ನು ನನಸಾಗಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ
ರಾಜಕೀಯ ವಿಚಾರಗಳನ್ನು ಬದಿಗಿಟ್ಟು, ನಮ್ಮ ರಾಷ್ಟ್ರದ ಆಶಯಗಳ ಈಡೇರಿಕೆ ಉದ್ದೇಶದಿಂದ ಕೆಲಸ ಮಾಡಬೇಕಿದೆ. ಭಾರತವು ಈ ವರ್ಷಗಳಲ್ಲಿ ತನ್ನ ಆಕಾಂಕ್ಷೆಗಳು ಮತ್ತು ನಿರ್ಣಯಗಳನ್ನು ಪೂರೈಸಲು ನಿರ್ಧರಿಸಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಚುನಾವಣೆಗಳು ಬಹಳ ದೂರವಿಲ್ಲ. ಕೆಲವರು ಆತಂಕಕ್ಕೊಳಗಾಗಬಹುದು. ಆದರೆ ಇದು ಪ್ರಜಾಪ್ರಭುತ್ವದ ಅತ್ಯಗತ್ಯ ಅಂಶವಾಗಿದೆ. ನಾವೆಲ್ಲರೂ ಇದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ. ನಮ್ಮ ಚುನಾವಣೆಗಳು ದೇಶದ ಹೆಮ್ಮೆಯನ್ನು ಹೆಚ್ಚಿಸುತ್ತವೆ. ಪ್ರಜಾಪ್ರಭುತ್ವ ಸಂಪ್ರದಾಯವನ್ನು ಅನುಸರಿಸುತ್ತವೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಮಮಂದಿರ ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ: ಮೋದಿ
ಮುಂದಿನ 25 ವರ್ಷಗಳು ನಮ್ಮ ದೇಶಕ್ಕೆ ಬಹಳ ಮುಖ್ಯ. ರಾಜಕೀಯ ಚಟುವಟಿಕೆಗಳು ತಮ್ಮ ಸ್ಥಾನವನ್ನು ಹೊಂದಿವೆ. ಆದರೆ ದೇಶದ ಆಕಾಂಕ್ಷೆಗಳು, ನಿರೀಕ್ಷೆಗಳು, ಕನಸು ಮತ್ತು ಸಂಕಲ್ಪವೆಂದರೆ ಈ 25 ವರ್ಷಗಳಲ್ಲಿ ಅಪರೇಕ್ಷಿತ ಗುರಿ ಸಾಧಿಸುವುದಾಗಿದೆ ಎಂದು ತಿಳಿಸಿದ್ದಾರೆ.