ಬೆಳಗ್ಗೆ ಜಮೀನಲ್ಲಿ ಆನೆ ಹಿಂಡು ದಾಳಿ – ಸಂಜೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗದ ಗಜಗಾಂಭೀರ್ಯದ ನಡಿಗೆ

Public TV
2 Min Read
hsn elephant

ಹಾಸನ: ಬೆಳಂ ಬೆಳಗ್ಗೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡಿದ್ದ ಆನೆಗಳ ದಾಳಿಗೆ ಕಂಗಾಲಾಗಿದ್ದ ಗ್ರಾಮಸ್ಥರು ಸಂಜೆ ಆಗುತ್ತಿದಂತೆ ಗ್ರಾಮಕ್ಕೆ ಭೇಟಿ ಕೊಟ್ಟ ಒಂಟಿ ಸಲಗ ನೋಡಿ ಆತಂಕ್ಕೆ ಒಳಗಾದ ಘಟನೆ ಜಿಲ್ಲೆಯ ಸಕಲೇಶಪುರದ ಚಿನ್ನಳ್ಳಿಯಲ್ಲಿ ನಡೆದಿದೆ.

ಗ್ರಾಮಕ್ಕೆ ಏಕಾಏಕಿ ಎಂಟ್ರಿ ಕೊಟ್ಟಿದ್ದ ಒಂಟಿ ಸಲಗ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜೋರಾಗಿ ಘೀಳಿಡುತ್ತಾ ರಾಜರೋಷವಾಗಿ ನಡೆದಾಟಿದೆ. ಒಂಟಿಸಲಗನನ್ನು ಕಂಡ ಕೂಡಲೇ ಗ್ರಾಮಸ್ಥರು ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಗ್ರಾಮದ ಯುವಕ ಆನೆ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದು, ಆನೆಯ ಗಾಂಭೀರ್ಯದ ನಡೆಯನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ.

hsn

ಒಂಟಿ ಸಲಗವಾದ ಕಾರಣ ಗ್ರಾಮದ ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ದಾಳಿ ನಡೆಸಿವ ಸಾಧ್ಯತೆಗಳಿತ್ತು. ಆದರೆ ಈ ವೇಳೆ ಯಾರು ಆನೆಗೆ ಅಡ್ಡ ಪಡಿಸದ ಹಿನ್ನೆಲೆಯಲ್ಲಿ ಗ್ರಾಮದಿಂದ ಹೊರ ನಡೆದಿದೆ. ಅದೃಷ್ಟವಶಾತ್ ಗ್ರಾಮಸ್ಥರು ಬೇಗ ಎಚ್ಚರಗೊಂಡ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ. ಪ್ರಮುಖವಾಗಿ ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ರೈತರ ತೋಟಗಳಿಗೆ ನುಗ್ಗಿರುವ ಆನೆಗಳ ಹಿಂಡು ಬೆಳೆಗಳನ್ನು ನಾಶ ಪಡಿಸಿದೆ. ಒಂಟಿ ಸಲಗ ಗ್ರಾಮ ಪ್ರವೇಶಿಸುವ ಮುನ್ನ ರೈತರ ಹೊಲಗಳಿಗೆ ಸುಮಾರು 16 ಆನೆಗಳ ಹಿಂಡು ದಾಳಿ ನಡೆಸಿದ್ದವು. ಆನೆಗಳ ದಾಳಿಯಿಂದ ಗ್ರಾಮಸ್ಥರ ಬೆಳೆ ನಾಶವಾಗಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.

ಇತ್ತ ಕಳೆದ ಒಂದು ವಾರದಿಂದ ಆನೆ ದಾಳಿಗೆ ಪರಿಹಾರ ನೀಡಿ ಶಾಶ್ವತ ಪರಿಹಾರ ನೀಡಬೇಕೆಂದು ಸಕಲೇಶಪುರ ತಾಲುಕಿನ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಂದು ಅಂತ್ಯಗೊಂಡಿದೆ. ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಆನೆ ಹಾವಳಿಗೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರದ ಭರವಸೆ ಲಭಿಸಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಸಿಎಂ ಸಭೆಯಲ್ಲಿನ ತೀರ್ಮಾನವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಹೋರಾಟಗಾರರಿಗೆ ತಿಳಿಸಿದ್ದು, ಭರವಸೆ ಶೀಘ್ರ ಈಡೇರಿಸಲು ಗಡುವು ನೀಡಿದ ರೈತರು ಹೋರಾಟ ಅಂತ್ಯಗೊಳಿಸಿದರು.

https://www.youtube.com/watch?v=bW_PRxClGpE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article