ಬೆಂಗಳೂರು: ಗಂಡನ ಬಳಿಯೇ 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿಯನ್ನ ಬಂಧಿಸುವಲ್ಲಿ ಎಸ್ಜೆ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಹೊಸೂರು ಮೂಲದ ನಾಗಲಕ್ಷ್ಮಿ ಬಂಧಿತ ಮಹಿಳೆ. ಈಕೆ ಬೆಂಗಳೂರಿನಿಂದ ತಮಿಳುನಾಡಿನ ಸೇಲಂಗೆ ಬಸ್ನಲ್ಲಿ ಹೋಗುವಾಗ ತನ್ನ ಗಂಡನ ಬಳಿಯೇ ಚಿನ್ನಾಭರಣ ಕದ್ದಿದ್ದಳು. ಆದ್ರೆ ತಮಿಳುನಾಡಿನ ಸೇಲಂನಲ್ಲಿ ಚಿನ್ನ ಮಾರಾಟದ ವೇಳೆ ನಾಗಲಕ್ಷ್ಮಿ ಪೆÇಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತ ಮಹಿಳೆಯಿಂದ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?: ಬೆಂಗಳೂರಿನ ಚೆಮ್ಮನೂರು ಜ್ಯೂವೆಲರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಮುನಿಯಪ್ಪನ್ ಫೆಬ್ರವರಿ 21 ರಂದು ಬೆಂಗಳೂರಿನಿಂದ ಸೇಲಂಗೆ 1 ಕೆಜಿ ಚಿನ್ನ ತೆಗೆದುಕೊಂಡು ಹೋಗ್ತಿದ್ರು. ಈ ವೇಳೆ ಜೊತೆಯಲ್ಲೇ ಬಂದ ಹೆಂಡತಿ ನಾಗಲಕ್ಷ್ಮಿ ಗಂಡನಿಗೆ ಜ್ಯೂಸ್ನಲ್ಲಿ ನಿದ್ದೆ ಮಾತ್ರೆ ಹಾಕಿ ದರೋಡೆ ಮಾಡಿದ್ದಳು. ನಂತರ ಬಸ್ನಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಅಂತಾ ಡ್ರಾಮಾ ಮಾಡಿದ್ದಳು. ಈ ಬಗ್ಗೆ ಎಸ್.ಜೆ.ಪಾರ್ಕ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ನಾಗಲಕ್ಷ್ಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.